ಕಾರು ಅಪಘಾತ: ಚಾಲಕ ಮೃತ್ಯು
ಕಾರ್ಕಳ, ಫೆ.19: ಕಾರ್ಕಳ -ಅಜೆಕಾರು ರಾಜ್ಯ ಹೆದ್ದಾರಿಯ ಬಂಟ್ರಬೆಟ್ಟು ತಿರುವಿನಲ್ಲಿ ಫೆ.18ರಂದು ಮಧ್ಯಾಹ್ನ ವೇಳೆ ಕಾರೊಂದು ನಿಯಂತ್ರಣ ತಪ್ಪಿ ರಸ್ತೆ ಬದಿಯ ಧರೆಗೆ ಢಿಕ್ಕಿ ಹೊಡೆದ ಪರಿಣಾಮ ಚಾಲಕ ಮೃತಪಟ್ಟ ಬಗ್ಗೆ ವರದಿಯಾಗಿದೆ.
ಮೃತರನ್ನು ಫ್ರಾನ್ಸಿಸ್ ಎಂದು ಗುರುತಿಸಲಾಗಿದೆ. ಕಾರ್ಕಳ ಕಡೆಯಿಂದ ಅಜೆಕಾರು ಕಡೆಗೆ ಹೋಗುತ್ತಿದ್ದ ಕಾರು ರಸ್ತೆ ಬದಿಯ ದರೆಗೆ ಡಿಕ್ಕಿ ಹೊಡೆದು ಜಖಂಗೊಂಡಿತ್ತೆನ್ನಲಾಗಿದೆ.
ಇದರಿಂದ ಕಾರು ಚಾಲಕ ಫ್ರಾನ್ಸಿಸ್ ಗಂಭೀರವಾಗಿ ಗಾಯಗೊಂಡು ಕಾರ್ಕಳ ಸರಕಾರಿ ಆಸ್ಪತ್ರೆಗೆ ಸಾಗಿಸುವ ದಾರಿ ಮಧ್ಯೆ ಮೃತ ಪಟ್ಟರು. ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story