ಮಂಗಳೂರು: ಫೆ. 22ರಂದು ನೂತನ ಪೊಲೀಸ್ ಆಯುಕ್ತರು ಅಧಿಕಾರ ಸ್ವೀಕಾರ
ಸಂದೀಪ್ ಪಾಟೀಲ್
ಮಂಗಳೂರು, ಫೆ.21: ನಗರ ಪೊಲೀಸ್ ನೂತನ ಆಯುಕ್ತರಾಗಿ ಸಂದೀಪ್ ಪಾಟೀಲ್ ಅವರನ್ನು ವರ್ಗಾವಣೆಗೊಳಿಸಿ ಸರಕಾರ ಆದೇಶ ಹೊರಡಿಸಿದ್ದು, ಶುಕ್ರವಾರ ಅಧಿಕಾರ ಸ್ವೀಕರಿಸಲಿದ್ದಾರೆ.
ಟಿ.ಆರ್.ಸುರೇಶ್ ಅವರನ್ನು ಬೆಂಗಳೂರಿಗೆ ವರ್ಗಾವಣೆ ಮಾಡಲಾಗಿದೆ. ಮೂಲತಃ ಬೆಂಗಳೂರಿನ ನಿವಾಸಿಯಾಗಿರುವ ಸಂದೀಪ್ ಪಾಟೀಲ್ 2004ನೇ ಬ್ಯಾಚ್ನ ಐಪಿಎಸ್ ಅಧಿಕಾರಿ. ದಾವಣಗೆರೆ, ಬೆಳಗಾವಿ, ಮಂಡ್ಯ ಮೊದಲಾದ ಕಡೆ ಎಸ್ಪಿಯಾಗಿ ಕರ್ತವ್ಯ ನಿರ್ವಹಿಸಿ ಡಿಐಜಿ ಹುದ್ದೆಗೆ ಭಡ್ತಿ ಹೊಂದಿದ್ದರು.
ಪ್ರಸ್ತುತ ಬೆಂಗಳೂರು ಸಿಎಆರ್ ಘಟಕದಲ್ಲಿ ಡಿಐಜಿ ಹಾಗೂ ಜಂಟಿ ಆಯುಕ್ತರಾಗಿದ್ದರು. ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ವರ್ಗಾವಣೆ ಮಾಡಲಾಗಿದೆ.
ಫೆ.20ರಿಂದಲೇ ಅನ್ವಯವಾಗುವಂತೆ ಸರಕಾರ ಈ ಆದೇಶ ಹೊರಡಿಸಿದ್ದು, ಇವರಲ್ಲದೆ 30 ಮಂದಿ ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆಗೊಳಿಸಿ ರಾಜ್ಯ ಸರಕಾರ ಆದೇಶ ಹೊರಡಿಸಿದೆ.
Next Story