ದಾರಿದೀಪ ಕಂಬದಿಂದ ಬಿದ್ದು ಎಲೆಕ್ಟ್ರೀಶಿನ್ ಮೃತ್ಯು
ಮಲ್ಪೆ, ಫೆ.22: ಕಂಬ ಹತ್ತಿ ಉಡುಪಿ ನಗರಸಭೆಯ ದಾರಿದೀಪ ದುರಸ್ತಿ ಮಾಡುತ್ತಿದ್ದ ಎಲೆಕ್ಟ್ರೀಶಿನ್ ಕೆಳಗೆ ಬಿದ್ದು ಮೃತಪಟ್ಟ ಘಟನೆ ಮಧ್ವನಗರ ಮುಖ್ಯ ಪ್ರಾಣ ರಸ್ತೆ ಎಂಬಲ್ಲಿ ಫೆ.21ರಂದು ಸಂಜೆ 6ಗಂಟೆ ಸುಮಾರಿಗೆ ನಡೆದಿದೆ.
ಮೃತರನ್ನು ಇಂದ್ರಾಳಿ ದೇವಸ್ಥಾನದ ಬಳಿಯ ನಿವಾಸಿ ಶ್ರೀಪತಿ ಭಟ್ ಎಂಬ ವರ ಮಗ ವಾದಿರಾಜ್ ಭಟ್(39) ಎಂದು ಗುರುತಿಸಲಾಗಿದೆ.
ಇವರು ದಾರಿದೀಪ ಕಂಬಕ್ಕೆ ಹತ್ತಿ ವಿದ್ಯುತ್ ದೀಪ ದುರಸ್ಥಿ ಮಾಡುತ್ತಿದ್ದಾಗ ಅಕಸ್ಮಿಕವಾಗಿ ಕೆಳಗೆ ಬಿದ್ದರೆನ್ನಲಾಗಿದೆ. ಗಂಭೀರವಾಗಿ ಗಾಯಗೊಂಡ ಅವರು ಉಡುಪಿ ಖಾಸಗಿ ಆಸ್ಪತ್ರೆಗೆ ಸಾಗಿಸುವ ದಾರಿ ಮಧ್ಯೆ ಮೃತಪಟ್ಟರು.
ಈ ಬಗ್ಗೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story