ಅಳೇಕಲ: ಹುತಾತ್ಮ ವೀರ ಯೋಧರಿಗಾಗಿ ಸಂತಾಪ ಸಭೆ
ಮಂಗಳೂರು, ಫೆ. 22: ಅಳೇಕಲ ನುಸ್ರತುಲ್ ಮಸಾಕೀನ್ ಟ್ರಸ್ಟ್, ಸಫರ್ ಮಂಚಿಲ, ಅಳೇಕಲ ಸ್ಪೋಟಿಂಗ್, ಬಿ ಬಾಯ್ಸ್, ಮಾರ್ಗತ್ತಲೆ ಯುನೈಟೆಡ್ ಚಾರಿಟೇಬಲ್ ಟ್ರಸ್ಟ್, ಸೆವೆನ್ ಸ್ಟಾರ್, ನಜತ್ ಕ್ರಿಕೆಟರ್ಸ್ ಅಳೇಕಲ, ಯಂಗ್ಬಾಯ್ಸ್, ಯಂಗ್ ಫ್ರೆಂಡ್ಸ್, ಮೆಹಫಿಲ್ ಗೈಯ್ಸ್, ಗಡಗಡ ಗೈಯ್ಸ್ ಅಳೇಕಲ ಇವುಗಳ ಸಂಯುಕ್ತ ಆಶ್ರಯದಲ್ಲಿ ಪುಲ್ವಾಮಾದಲ್ಲಿ ಉಗ್ರರು ನಡೆಸಿದ ಯೋಧರ ಹತ್ಯೆಯನ್ನು ಖಂಡಿಸಿ ಳೇಕಲದಲ್ಲಿ ಗುರುವಾರ ನಡೆದ ಸಂತಾಪ ಸಭೆ ನಡೆಯಿತು.
ಉಳ್ಳಾಲ ನಗರಸಭೆಯ ಸದಸ್ಯರಾದ ಅಯೂಬ್ ಮಂಚಿಲ, ಯು.ಎ.ಇಸ್ಮಾಯೀಲ್, ಯು.ಕೆ.ಮುಸ್ತಫ, ಅಸ್ಗರ್ ಅಲಿ, ಯು.ಎನ್.ಮುಹಮ್ಮದ್, ಮುಹಮ್ಮದ್ ಹನೀಫ್, ಮುಹಮ್ಮದ್ ಫಾರೂಕ್, ಆಸಿಫ್ ಮಾರ್ಗತ್ತಲೆ, ಕಬೀರ್ ಅಳೇಕಲ, ರಹ್ಮತ್ ಅಳೇಕಲ, ನಝೀರ್ ಆರ್.ಕೆ., ದರ್ಗಾ ಸಮಿತಿಯ ಸದಸ್ಯರಾದ ಕುಂಞಿಮೋನು, ಅಲಿಮೋನು, ಜಾಫರ್ ಅಳೇಕಲ, ಇಬ್ರಾಹೀಂ ಕಕ್ಕೆತೋಟ, ಯು.ಬಿ. ಸಿದ್ದೀಕ್, ಶಕೀಲ್, ರಿಯಾಝ್ ಮಾರ್ಗತ್ತಲೆ ಮತ್ತಿತರರು ಪಾಲ್ಗೊಂಡಿದ್ದರು.
Next Story