ಮಂಜೇಶ್ವರ: ರಕ್ತದಾನ ಶಿಬಿರ
ಮಂಜೇಶ್ವರ, ಫೆ.23: ಕಾಸರಗೋಡು - ಬಂಗ್ರ ಮಂಜೇಶ್ವರದ ಲಕ್ಕಿ ಬ್ರದರ್ಸ್ ಆರ್ಟ್ಸ್ ಮತ್ತು ಸ್ಪೋಟ್ಸ್ ಕ್ಲಬ್ ಹಾಗೂ ಬ್ಲಡ್ ಡೋನರ್ಸ್ ಮಂಗಳೂರು ಇದರ ಆಶ್ರಯದಲ್ಲಿ ದೇರಳಕಟ್ಟೆಯ ಯೆನೆಪೊಯ ಬ್ಲಡ್ ಬ್ಯಾಂಕ್ -ಸಹಭಾಗಿತ್ವದಲ್ಲಿ ರಕ್ತದಾನ ಶಿಬಿರವು ಕೇರಳ ಕರ್ನಾಟಕದ ಗಡಿಭಾಗ ಕಾಡಿಯರ್ ಬಂಗ್ರ ಮಂಜೇಶ್ವರ ಬಳಿ ನಡೆಯಿತು.
ಮಂಜೇಶ್ವರ ಬ್ಲಾಕ್ ಪಂಚಾಯತ್ ಸದಸ್ಯ ಮುಸ್ತಫಾ ಉದ್ಯಾವರ ಉದ್ಘಾಟಿಸಿದರು. ಲಕ್ಕಿ ಬ್ರದರ್ಸ್ ಅಧ್ಯಕ್ಷ ಬಿ.ಎಂ.ಅಶ್ರಫ್ ಕಾರ್ಯಕ್ರಮದ ಅದ್ಯಕ್ಷತೆ ವಹಿಸಿದ್ದರು. ಬಂಗ್ರ ಮಂಜೇಶ್ವರ ಮುಹಿಯುದ್ದೀನ್ ಜುಮಾ ಮಸೀದಿಯ ಖತೀಬ್ ಕರೀಂ ಫೈಝಿ ಕುಂತೂರು ದುಆಗೈದರು.
ಮುಖ್ಯ ಅತಿಥಿಗಳಾಗಿ ಅಬ್ದುಲ್ಲಾ ಅಝ್ಹರಿ, ಅಂದು ದಾರುಸಲಾಮ್, ಹರೀಶ್ಚಂದ್ರ ಮಂಜೇಶ್ವರ, ಕೆ.ಎಂ.ಕೆ. ಹಾಜಿ ಹೊಸಬೆಟ್ಟು ಹಾಗೂ ಹಮೀದ್ ಹೊಸಂಗಡಿ ಉಪಸ್ಥಿತರಿದ್ದರು.
ಈ ಶಿಬಿರದಲ್ಲಿ ಸುಮಾರು 70ಕ್ಕೂ ಅಧಿಕ ರಕ್ತದಾನಿಗಳು ಸ್ವಯಂಪ್ರೇರಿತವಾಗಿ ರಕ್ತದಾನ ಮಾಡಿದರು. ಬ್ಲಡ್ ಡೋನರ್ಸ್ ಮಂಗಳೂರು ತಂಡದ ಸಲಾಂ ಚೆಂಬುಗುಡ್ಡೆ, ಫಯಾಝ್ ಮಾಡೂರು, ಅದ್ನಾನ್ ಕುಂಜತ್ತೂರು, ಫಾರೂಕ್ ಬಿಗ್ ಗ್ಯಾರೇಜ್, ಮುನೀರ್ ಚೆಂಬುಗುಡ್ಡೆ ಉಪಸ್ಥಿತರಿದ್ದರು.
ಸಿದ್ದೀಕ್ ಮಂಜೇಶ್ವರ ಪ್ರಾಸ್ತಾವಿಕ ಮಾತನಾಡಿ ಸ್ವಾಗತಿಸಿದರು, ಇಬ್ರಾಹೀಂ ವಂದಿಸಿದರು.
ಈ ಸಂದರ್ಭ ಬ್ಲಡ್ ಡೋನರ್ಸ್ ಮಂಗಳೂರು ಅಧ್ಯಕ್ಷ ಸಿದ್ದೀಕ್ ಮಂಜೇಶ್ವರ ಮತ್ತು ಸಮಾಜ ಸೇವಕ ಅಂದು ಮಂಜೇಶ್ವರ ಹಾಗೂ ಮುಹಮ್ಮದ್ ಕುಂಞಿಯವರನ್ನು ಸನ್ಮಾನಿಸಲಾಯಿತು.