ಲೋಕಸಭಾ ಚುನಾವಣೆ: ಪೊಲೀಸ್ ಇನ್ಸ್ಪೆಕ್ಟರ್ಗಳ ವರ್ಗಾವಣೆ
ಮಂಗಳೂರು, ಫೆ.23: ಮುಂಬರುವ ಲೋಕಸಭಾ ಚುನಾವಣೆ ಹಿನ್ನೆಲೆಯ ಪೂರ್ವಸಿದ್ಧತೆ ಹಿನ್ನೆಲೆಯಲ್ಲಿ ಮಂಗಳೂರು ನಗರದ ಇನ್ಸ್ಪೆಕ್ಟರ್ಗಳನ್ನು ವರ್ಗಾವಣೆಗೊಳಿಸಿ, ಹೊಸ ಅಧಿಕಾರಿಗಳ ನೇಮಕಗೊಳಿಸಿ ಸರಕಾರ ಆದೇಶ ಹೊರಡಿಸಲಾಗಿದೆ.
ಮಂಗಳೂರು ನಗರ ಸಿಸಿಬಿ ಇನ್ಸ್ಪೆಕ್ಟರ್ ಶಾಂತಾರಾಮ್ ಅವರನ್ನು ಕಾಪು ಸರ್ಕಲ್ ಇನ್ಸ್ಪೆಕ್ಟರ್, ಮೂಲ್ಕಿ ಇನ್ಸ್ಪೆಕ್ಟರ್ ಅನಂತ ಪದ್ಮನಾಭ ಅವರನ್ನು ಅಶೋಕಪುರಂ ಮೈಸೂರಿಗೆ, ಬರ್ಕೆ ಇನ್ಸ್ಪೆಕ್ಟರ್ ಉಮೇಶ್ ಅವರನ್ನು ಉದಯಗಿರಿ ಮೈಸೂರಿಗೆ, ಉರ್ವ ಠಾಣೆಯ ಇನ್ಸ್ಪೆಕ್ಟರ್ ಮುಹಮ್ಮದ್ ಶರ್ೀ ಅವರನ್ನು ಚಿಕ್ಕಮಗಳೂರು ಗ್ರಾಮಾಂತರ ಠಾಣೆಗೆ, ಮಂಗಳೂರು ಸಿಟಿ ಎಸ್ಬಿ ವಿಭಾಗ ಮೋಹನ್ ಕೊಟ್ಟಾರಿ ಅವರನ್ನು ಎಸಿಬಿ, ಟ್ರಾಫಿಕ್ ಪಶ್ಚಿಮ ಇನ್ಸ್ಪೆಕ್ಟರ್ ಅಮಾನುಲ್ಲಾ ಅವರನ್ನು ಮೈಸೂರು ನಗರ ದೇವರಾಜ್ ಟ್ರಾಫಿಕ್ಗೆ ವರ್ಗಾವಣೆ ಮಾಡಲಾಗಿದೆ.
ಕಂಕನಾಡಿ ಠಾಣಾ ಇನ್ಸ್ಪೆಕ್ಟರ್ ಅಶೋಕ್ ಅವರನ್ನು ಮೈಸೂರು ಕೆ.ಆರ್. ಸಂಚಾರ ಠಾಣೆ, ಟ್ರಾಫಿಕ್ ದಕ್ಷಿಣ ಠಾಣೆಗೆ ಇನ್ಸ್ಪೆಕ್ಟರ್ ಗುರುದತ್ತ್ ಕಾಮತ್ ಅವರನ್ನು ಸಿದ್ಧಾರ್ಥನಗರ ಟ್ರಾಫಿಕ್ ಠಾಣೆಗೆ, ಕದ್ರಿ ಠಾಣಾ ಇನ್ಸ್ಪೆಕ್ಟರ್ ಮಾರುತಿ ನಾಯಕ್ ಅವರನ್ನು ಡಿಸಿಆರ್ಇ ಠಾಣೆಗೆ, ಮಂಗಳೂರು ಟ್ರಾಫಿಕ್ ಪೂರ್ವ ಠಾಣಾ ಇನ್ಸ್ಪೆಕ್ಟರ್ ಶಿವಪ್ರಕಾಶ್ ಅವರನ್ನು ಸಿಎಸ್ಪಿ ಠಾಣೆಗೆ ವರ್ಗಾವಣೆ ಮಾಡಲಾಗಿದೆ.
ಮೈಸೂರು ಅಶೋಕಪುರಂ ಇನ್ಸ್ಪೆಕ್ಟರ್ ಸಿದ್ಧರಾಜು ಪಿ.ಎಂ. ಮುಲ್ಕಿ ಠಾಣೆಗೆ, ಮೈಸೂರು ದೇವರಾಜ ಟ್ರಾಫಿಕ್ ಇನ್ಸ್ಪೆಕ್ಟರ್ ಸೂರಜ್ ಪಿ.ಎ. ಬರ್ಕೆ ಠಾಣೆಗೆ, ಮೈಸೂರು ಹೆಬ್ಬಾಳ ಇನ್ಸ್ಪೆಕ್ಟರ್ ಗುರುಪ್ರಸಾದ್ ಉರ್ವ ಠಾಣೆಗೆ, ಮೈಸೂರು ನಗರ ಸಿಸಿಐಬಿ ಇನ್ಸ್ಪೆಕ್ಟರ್ ಅಶೋಕ್ ಕುಮಾರ್ ಟಿ. ಮಂಗಳೂರು ಪಶ್ಚಿಮ ಠಾಣೆಗೆ, ಮೈಸೂರು ಕೆ.ಆರ್. ಟ್ರಾಫಿಕ್ ಠಾಣೆಯ ಜಗದೀಶ್ ಆರ್. ಕಂಕನಾಡಿ ಠಾಣೆಗೆ, ಮೈಸೂರು ಲಕ್ಷ್ಮೀಪುರಂ ಠಾಣಾ ಇನ್ಸ್ಪೆಕ್ಟರ್ ಗಂಗಾಧರ ಎಸ್. ಮೂಡುಬಿದಿರೆ ಠಾಣೆಗೆ, ಹುಬ್ಬಳ್ಳಿ-ಧಾರವಾಡ ಸಿಸಿಬಿ ಇನ್ಸ್ಪೆಕ್ಟರ್ ಶಿವಪ್ರಕಾಶ್ ರಾಜೇಂದ್ರ ಸಿಸಿಬಿ ಮಂಗಳೂರು ನಗರ, ಕೆಎಲ್ಎ ರೇವಣ್ಣ ಸಿಸಿಆರ್ಬಿ ಮಂಗಳೂರು ನಗರ, ಎಸಿಬಿ ಸತೀಶ್ ಜಿ.ಜೆ. ಮಂಗಳೂರು ಸಿಸಿಬಿ ವಿಶೇಷ ಠಾಣೆಗೆ ವರ್ಗಾಯಿಸಲಾಗಿದೆ.
ಮಡಿಕೇರಿ ನಗರ ಠಾಣಾ ಇನ್ಸ್ಪೆಕ್ಟರ್ ಅನೂಪ್ ಮೇದಪ್ಪ ಮಂಗಳೂರು ನಗರ ಎಸ್ಬಿ., ಡಿಸಿಐಬಿ ಕೊಡಗು ಇನ್ಸ್ಪೆಕ್ಟರ್ ಮಹೇಶ್ ಎಂ. ಮಂಗಳೂರು ಕದ್ರಿ ಠಾಣೆಗೆ, ಗೋಣಿಕೊಪ್ಪ ಇನ್ಸ್ಪೆಕ್ಟರ್ ದಿವಾಕರ್ ಸಿ.ಎನ್. ಮಂಗಳೂರು ಉತ್ತರ ಪೊಲೀಸ್ ಠಾಣೆ, ವಿರಾಜಪೇಟೆ ಇನ್ಸ್ಪೆಕ್ಟರ್ ಕೌಮರಾದಿ ಮಂಗಳೂರು ದಕ್ಷಿಣ ಪೊಲೀಸ್ ಠಾಣೆಗೆ, ಡಿಸಿಐಬಿ ಚಿಕ್ಕಮಗಳೂರು ಇನ್ಸ್ಪೆಕ್ಟರ್ ಸತ್ಯನಾರಾಯಣ ಕೆ. ಪಣಂಬೂರು ಠಾಣೆಗೆ, ಹರಿಕೃಷ್ಣ ಕೆ. ಪಾಟೀಲ್ ಮಂಗಳೂರು ಉತ್ತರ ಟ್ರಾಫಿಕ್ ಠಾಣೆಗೆ ವರ್ಗಾವಣೆ ಮಾಡಿ ಸರಕಾರ ಆದೇಶ ಮಾಡಿದೆ.
ವರ್ಗಾವಣೆಯಾದ ಅಧಿಕಾರಿಗಳು ಕೂಡಲೇ ನೇಮಕಗೊಂಡ ಠಾಣೆಯಲ್ಲಿ ಕೂಡಲೇ ವರದಿ ಮಾಡಲು ಸುತ್ತೋಲೆಯಲ್ಲಿ ತಿಳಿಸಲಾಗಿದೆ.