ಫೆ. 24: ಬೊಳ್ಮಿನಾರ್ ಶುಹದಾ ನಗರ ಉರೂಸ್ ಸಮಾರೋಪ
ಮಂಗಳೂರು, ಫೆ.23: ಬೆಳ್ತಂಗಡಿ ತಾಲೂಕಿನ ಬೊಳ್ಮಿನಾರ್ ಶುಹದಾ ನಗರ ಉರೂಸ್ನ ಸಮಾರೋಪ ಕಾರ್ಯಕ್ರಮವು ಫೆ.24ರಂದು ರಾತ್ರಿ ನಡೆಯಲಿದೆ.
ಸಮಾರೋಪ ಸಮಾರಂಭವನ್ನು ಮಂಗಳೂರು ಪಕ್ಕಲಡ್ಕ ಖತೀಬರಾದ ನಝೀರ್ ಅಝ್ಹರಿ ಬೋಳ್ಮಿನಾರ್ ಉದ್ಘಾಟಿಸಲಿದ್ದು, ಅಲ್-ಖಾದಿಸ ಕಾವಳಕಟ್ಟೆ ಪ್ರಾಂಶುಪಾಲ ಹಾಫೀಲ್ ಸೂಫಿಯಾನ್ ಸಖಾಫಿ ಮುಖ್ಯ ಭಾಷಣ ಮಾಡಲಿದ್ದಾರೆ.
ಸೈಯದ್ ಅಹ್ಮದ್ ಜಲಾಲುದ್ದೀನ್ ಅಲ್- ಬುಖಾರಿ ತಂಙಳ್ ಮಲ್ಹರ್ ಮಂಜೇಶ್ವರ ಸಮಾರಂಭದ ಅಧ್ಯಕ್ಷತೆ ವಹಿಸಿ, ದುಆಃಗೈಯಲಿದ್ದಾರೆ. ಸ್ಥಳೀಯ ಖತೀಬರಾದ ಮುಹ್ಯುದ್ದೀನ್ ಝೂಹುರಿ ಸ್ವಾಗತಿಸಲಿದ್ದಾರೆ. ಇನ್ನಿತರ ಉಲಮಾ, ನೇತಾರರು ಭಾಗವಹಿಸಲಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.
Next Story