ಅನಿಲಕಟ್ಟೆ: ಮರ ಮೈಮೇಲೆ ಬಿದ್ದು ಕಾರ್ಮಿಕ ಮೃತ್ಯು
ಬಂಟ್ವಾಳ, ಮಾ.6: ಮರ ಕಡಿಯುತ್ತಿದ್ದ ವೇಳೆ ಆಕಸ್ಮಿಕವಾಗಿ ಮರ ಮೈಮೇಲೆ ಬಿದ್ದು ಕಾರ್ಮಿಕರೊಬ್ಬರು ಮೃತಪಟ್ಟ ಘಟನೆ ವಿಟ್ಲ ಪೊಲೀಸ್ ಠಾಣಾ ವ್ಯಾಪ್ತಿಯ ಅನಿಲಕಟ್ಟೆ ಸಮೀಪದ ಸೊರಂಗದಮೂಲೆ ಎಂಬಲ್ಲಿ ಬುಧವಾರ ನಡೆದಿದೆ.
ಇಲ್ಲಿಗೆ ಸಮೀಪದ ಮೂರ್ಜೆಬೆಟ್ಟು ನಿವಾಸಿ ಮಂಜಪ್ಪಗೌಡ(55) ಮೃತ ಕಾರ್ಮಿಕ. ಸೊರಂಗದಮೂಲೆಯಲ್ಲಿರುವ ಮೋನಪ್ಪಗೌಡ ಎಂಬವರ ಜಾಗದಲ್ಲಿ ಮರ ಕಡಿಯುವ ಕಾರ್ಯದಲ್ಲಿ ಕಾರ್ಮಿಕರು ತೊಡಗಿದ್ದಾಗ ಈ ದುರಂತ ಸಂಭವಿಸಿದೆ. ಈ ವೇಳೆ ಮರ ಆಕಸ್ಮಿಕವಾಗಿ ಮಂಜಪ್ಪರ ಮೈಮೇಲೆಯೇ ಬಿದ್ದಿದೆ. ಪರಿಣಾಮ ತಲೆಗೆ ಗಂಭೀರ ಗಾಯಗೊಂಡಿದ್ದ ಮಂಜಪ್ಪ ಆಸ್ಪತ್ರೆಗೆ ಸಾಗಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಮೃತ ಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಬಗ್ಗೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story