ಸಾಮಾಜಿಕ ಕಾರ್ಯಕರ್ತ ಅಬ್ದುರ್ರಝಾಕ್ರಿಗೆ ಚಂದ್ರಶೇಖರ ಸ್ವಾಮೀಜಿಯಿಂದ ಸನ್ಮಾನ
ಮುಲ್ಕಿ, ಮಾ.11: ರಾಜಕೀಯ ಕ್ಷೇತ್ರದಲ್ಲಿದ್ದುಕೊಂಡು ಸಮಾಜ ಸೇವೆಯಲ್ಲೂ ತೊಡಗಿಸಿಕೊಂಡಿರುವ ಅಬ್ದುರ್ರಝಾಕ್ ಅವರ ಕಾರ್ಯ ಶ್ಲಾಘನೀಯ ಎಂದು ಬೆಂಗಳೂರು ಆರ್.ಟಿ. ನಗರದ ಆಧ್ಯಾತ್ಮಿಕ ಗುರು, ಅಂತಾರಾಷ್ಟ್ರೀಯ ವಾಸ್ತುತಜ್ಞ ಶ್ರೀ ಚಂದ್ರಶೇಖರ ಸ್ವಾಮೀಜಿ ಹೇಳಿದ್ದಾರೆ.
ಮುಲ್ಕಿಯ ಸಾಮಾಜಿಕ ಕಾರ್ಯಕರ್ತ, ರಾಜಕೀಯ ಮುಖಂಡ ಅಬ್ದುರ್ರಝಾಕ್ ಅವರನ್ನು ಕಿಲ್ಪಾಡಿಯ ಆಶ್ರಮದ ವತಿಯಿಂದ ಸನ್ಮಾನಿಸಿ ಅವರು ಮಾತನಾಡಿದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಅಬ್ದುರ್ರಝಾಕ್, ಈ ಸನ್ಮಾನ ನನ್ನ ಜವಾಬ್ದಾರಿಯನ್ನು ಇನ್ನಷ್ಟು ಹೆಚ್ಚಿಸಿದೆ ಎಂದರು.
ಈ ಸಂದರ್ಭ ಸ್ವಾಮೀಜಿ ಆಶ್ರಮದ ಮಾತೃಶ್ರೀ ಸಂಸ್ಥೆಯ ಶಾರದಮ್ಮ, ನಿರ್ದೇಶಕಿ ರಜನಿ ಸಿ. ಭಟ್, ಜ್ಯೋತಿಷಿ ಉಷಾ ವಿಶ್ವನಾಥ್ ಭಟ್ ಉಪಸ್ಥಿತರಿದ್ದರು.
ಆಶ್ರಮದ ಸಂಚಾಲಕ ವಿಜಯಕುಮಾರ್ ಸ್ವಾಗತಿಸಿದರು.
ಮಾಧ್ಯಮ ಕಾರ್ಯದರ್ಶಿ ಪುನೀತ್ ಕೃಷ್ಣ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.
Next Story