ಅಂದರ್- ಬಾಹರ್: ಐವರ ಬಂಧನ
ಉಡುಪಿ, ಮಾ.19: ಕುಂದಾಪುರ ತಾಲೂಕಿನ ಮೊಳಹಳ್ಳಿ ಗ್ರಾಮದ ಕಂಬಳಮನೆ ರಸ್ತೆಯ ಹಾಡಿಯಲ್ಲಿ ಮಾ.18ರಂದು ಸಂಜೆ ವೇಳೆ ಅಂದರ್- ಬಾಹರ್ ಇಸ್ಪೀಟ್ ಜುಗಾರಿ ಆಡುತ್ತಿದ್ದ ಐವರನ್ನು ಉಡುಪಿ ಸೆ್ ಅಪರಾಧ ಪೊಲೀಸರು ಬಂಧಿಸಿದ್ದಾರೆ.
ಮೊಳಹಳ್ಳಿ ಗ್ರಾಮದ ಮಾಸ್ತಿಕಟ್ಟೆಯ ವಿರೇಂದ್ರ(38), ಹಳ್ಳಾಡಿ-ಹರ್ಕಾಡಿ ಗ್ರಾಮದ ಸುಧೀರ್(34), ಕೊಕ್ಕರ್ಣೆಯ ಸುರೇಶ್(29), ಜಯ(28), ಕೋಟೇಶ್ವರದ ಉದಯ ಬಂಧಿತ ಆರೋಪಿಗಳು. ಇವರಿಂದ 10,200ರೂ. ನಗದು ವಶಪಡಿಸಿಕೊಳ್ಳಲಾಗಿದೆ. ದಾಳಿ ವೇಳೆ ಓರ್ವ ಆರೋಪಿ ಪರಾರಿಯಾಗಿದ್ದಾನೆ.
ಈ ಬಗ್ಗೆ ಉಡುಪಿ ಸೆನ್ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story