ಗಂಟಲಿನಲ್ಲಿ ಹಾಲು ಸಿಲುಕಿ ಹಸುಗೂಸು ಮೃತ್ಯು
ಕೋಟ, ಎ.7: ಗಂಟಲಿನಲ್ಲಿ ಹಾಲು ಸಿಲುಕಿಕೊಂಡ ಪರಿಣಾಮ ಉಸಿರು ಗಟ್ಟಿ ಹಸುಗೂಸೊಂದು ಮೃತಪಟ್ಟ ಘಟನೆ ಎ.6ರಂದು ಬೆಳಗ್ಗೆ ಶಿರಿಯಾರ ಗ್ರಾಮದ ಉಳಿಮಕ್ಕಿ ಎಂಬಲ್ಲಿ ನಡೆದಿದೆ.
ಉಳಿಮಕ್ಕಿಯ ಶಂಕರ ನಾಯ್ಕ್ ಎಂಬವರ 2 ತಿಂಗಳು 6 ದಿನದ ಹೆಣ್ಣು ಮಗು ಸಮೃದ್ಧಿ ಮೃತ ಮಗು. ಹುಟ್ಟುವಾಗ ಕಡಿಮೆ ತೂಕವಿದ್ದ ಮಗುವಿಗೆ ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ ಸುಮಾರು 15 ದಿನಗಳ ಹಿಂದೆ ಮನೆಗೆ ಕರೆದುಕೊಂಡು ಬರಲಾಗಿತ್ತು.
ಕಫ ಕೆಮ್ಮುವಿನಿಂದ ಬಳಲುತ್ತಿದ್ದ ಮಗುವಿಗೆ ವೈದ್ಯರ ಸಲಹೆಯಂತೆ ಔಷಧಿ ನೀಡುತ್ತಿದು, ಎದೆ ಹಾಲನ್ನು ಚಮಚದಲ್ಲಿ ಮಗುವಿಗೆ ಕುಡಿಸುತ್ತಿದ್ದಾಗ ಆಕಸ್ಮಿಕ ವಾಗಿ ಗಂಟಲಿಗೆ ಹಾಲು ಸಿಕ್ಕಿಹಾಕಿ ಕೊಂಡಿತ್ತೆನ್ನಲಾಗಿದೆ. ಇದರಿಂದ ಉಸಿರು ಗಟ್ಟಿದ ಮಗು ಬ್ರಹ್ಮಾವರ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆದುಕೊಂಡು ಹೋಗುವಾಗ ಮೃತಪಟ್ಟಿತು.
ಈ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story