ಎಸ್ಸೈಗೆ ಹಲ್ಲೆ ನಡೆಸಿ ಕರ್ತವ್ಯಕ್ಕೆ ಅಡ್ಡಿ: ಮೂವರ ಬಂಧನ
ಕೋಟ, ಎ.10: ಕುಂದಾಪುರ ಸಂಚಾರ ಪೊಲೀಸ್ ಉಪನಿರೀಕ್ಷಕಿ ಸುಧಾ.ಬಿ ಅಘನಾಶಿನಿ ಹಾಗೂ ಇಂಟರ್ ಸೆಪ್ಟರ್ ವಾಹನ ಚಾಲಕನಿಗೆ ಹಲ್ಲೆ ನಡೆಸಿರುವ ಮೂವರನ್ನು ಕೋಟ ಪೊಲೀಸರು ಎ.9ರಂದು ತೆಕ್ಕಟ್ಟೆ ಎಂಬಲ್ಲಿ ಬಂಧಿಸಿದ್ದಾರೆ.
ಬಂಧಿತರನ್ನು ಮಂಗಳೂರು ಗುರುಪುರ ನಿವಾಸಿಗಳಾದ ಮುಹಮ್ಮದ್ ಶಮಿದ್, ಮೊಹಮ್ಮದ್ ಇಕ್ಬಾಲ್, ಮೊಹಮ್ಮದ್ ರಿಝವಾನ್ ಎಂದು ಗುರು ತಿಸಲಾಗಿದೆ. ಈ ವೇಳೆ ಹನೀಫ್ ಮತ್ತು ಪೈಝಲ್ ಎಂಬವರು ಓಡಿ ಪರಾರಿ ಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಸುಧಾ ಹಾಗೂ ಇತರ ಸಿಬ್ಬಂದಿಗಳು ಇಂಟರ್ಸೆಪ್ಟರ್ ವಾಹನದಲ್ಲಿ ವಾಹನ ನಿಲ್ಲಿಸಲು ಸೂಚಿಸಿದಾಗ ಆರೋಪಿಗಳು ವಾಹನವನ್ನು ನಿಲ್ಲಿಸದೆ ಮುಂದೆ ಹೋಗಿ ನಂತರ ತಿರುಗಿಸಿಕೊಂಡು ಬಂದು ಅವಾಚ್ಯ ಶಬ್ದದಿಂದ ನಿಂದಿಸಿ ಇಲಾಖಾ ವಾಹನ ಚಾಲಕನಿಗೆ ಹಾಗೂ ಸುಧಾ ಅವರಿಗೆ ಹಲ್ಲೆ ಮಾಡಿ ಕರ್ತವ್ಯಕ್ಕೆ ಅಡ್ಡಿ ಉಂಟು ಮಾಡಿರುವುದಾಗಿ ದೂರಲಾಗಿದೆ. ಈ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story