ಕಾಪುವಿನಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿ ವಿಶ್ರಾಂತಿ
ಪಡುಬಿದ್ರೆ, ಎ. 21: ಲೋಕಸಭಾ ಚುನಾವಣೆಯ ಪ್ರಚಾರದ ಬಳಿಕ ಮುಖ್ಯಮಂತ್ರಿ ಕುಮಾರ ಸ್ವಾಮಿ ಅವರು ವಿಶ್ರಾಂತಿ ಪಡೆಯಲು ಕಾಪು ಸಮೀಪದ ಮೂಳೂರಿನ ಸಾಯಿ ರಾಧಾ ಹೆರಿಟೇಲ್ ಗೆ ರವಿವಾರ ರಾತ್ರಿ ಆಗಮಿಸಿದ್ದಾರೆ.
ಸಾಯಿ ರಾಧಾ ಹೆರಿಟೇಜ್ಗೆ ಆಗಮಿಸಿದ ಅವರು ಅಲ್ಲಿ ಪಂಚ ಕರ್ಮ ಚಿಕಿತ್ಸೆಯನ್ನು ಪಡೆಯುತಿದ್ದಾರೆ. ಸೋಮವಾರವೂ ಇಲ್ಲಿ ವಿಶ್ರಾಂತಿ ಪಡೆಯಲಿದ್ದು, ಬಳಿಕ ಬೆಂಗಳೂರಿಗೆ ತೆರಳಲಿದ್ದಾರೆ ಎಂಬ ಮಾಹಿತಿ ಇದೆ.
ಅವರು ಪತ್ರಕರ್ತರನ್ನು ಕಂಡು ಕೋಪಗೊಂಡಿದ್ದು, ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಲು ನಿರಾಕರಿಸಿದರು.
Next Story