ಉಳ್ಳಾಲ : ಸಣ್ಣ ಸಣ್ಣ ವಯಸಿನಲ್ಲ್ಲಿ ಡೊಡ್ಡ ಡೊಡ್ಡ ಕಾಯಿಲೆ ಬರಲು ತ್ಯಾಜ್ಯ ಒಂದು ಕಾರಣ- ಎಂ.ಗೋಪಾಲ್ ಕೃಷ್ಣ ಭಟ್
ಉಳ್ಳಾಲ. ಎ, 24: ಸಣ್ಣ ಸಣ್ಣ ವಯಸಿನಲ್ಲ್ಲಿ ಡೊಡ್ಡ ಡೊಡ್ಡ ಕಾಯಲೆ ಬರಲು ತ್ಯಾಜ್ಯ ಒಂದು ಕಾರಣ ಎಂದು ಮೋಡಲ್ ಅಧಿಕಾರಿ ಎಂ.ಗೋಪಾಲ್ ಕೃಷ್ಣ ಭಟ್ ಅಭಿಪ್ರಾಯಪಟ್ಟರು.ವರು ಬೆಳ್ಮ ಗ್ರಾ.ಪಂ ಕಾರ್ಯಲಯದಲ್ಲಿ ನಡೆದ ಗ್ರಾಮ ಉದಯ ಸೇ ಭಾರತ ಉದಯ್ ಅಭಿಯಾನ ಮತ್ತು ರಾಷ್ಟ್ರೀಯ ಪಂಚಾಯತ್ ದಿವಸ್ ಕಾರ್ಯಕ್ರಮದ ಪ್ರಯುಕ್ತ ನಡೆದ ವಿಶೇಷ ಗ್ರಾಮ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು.
ವಿದ್ಯಾವಂತರ ಜಿಲ್ಲೆಯಲ್ಲಿ ತ್ಯಾಜ್ಯವನ್ನು ರಸ್ತೆ ಬದಿಗೆ ಎಸೆಯುತ್ತಾರೆ ಅದರೆ ಗ್ರಾ.ಪಂಚಾಯತ್ ತ್ಯಾಜ್ಯ ಎಸೆಯುವವರ ವಿರುದ್ಧ ದಂಡ ವಿಧಿಸುದಿಲ್ಲ. ಬೇರೆ ದೇಶಗಳಲ್ಲಿ ರಸ್ತೆ ಬದಿಯಲ್ಲಿ ತ್ಯಾಜ್ಯ ಎಸೆಯುವವರ ವಿರುದ್ಧ ದಂಡಹಾಕುವ ಮೂಲಕ ನಿಯಂತ್ರಿಸಲಾಗುತ್ತದೆ. ನಮ್ಮ ಗ್ರಾಮ ತ್ಯಾಜ್ಯ ಮುಕ್ತವಾಗಬೇಕಾದರೆ ನಮ್ಮ ಮನೆಯ ಕಸ ಪ್ಲಾಸ್ಟಿಕ್ಗಳನ್ನು ನಾವೇ ನಿಯಂತ್ರಿಸುವ ಮೂಲಕ ನಮ್ಮ ಗ್ರಾಮ ತ್ಯಾಜ್ಯ ಮುಕ್ತವಾಗಲು ಸಾಧ್ಯ ಎಂದರು.
ಬೆಳ್ಮ ಗ್ರಾ.ಪಂ ಅಧ್ಯಕ್ಷ ವಿಜಯ ಕೃಷ್ಣ ಪೂಜಾರಿ ಕಾರ್ಯಕ್ರಮದ ಆಧ್ಯಕ್ಷತೆ ವಹಿಸಿದರು. ಡಾ.ವಿಲ್ಮ ಡಿಸೋಜ ಅರೋಗ್ಯ ಜಾಗೃತಿಯ ಬಗ್ಗೆ ಮಾಹಿತಿ ನೀಡಿದರು. ಗುಣಾಜೆ ರಾಮ್ಚಂದ್ರ ಭಟ್ ಸ್ವಚ್ಛತೆಯ ಕುರಿತು ಚುಟುಕು ವಾಚಿಸಿದರು. ಬೆಳ್ಮ ಗ್ರಾ.ಪಂ ಉಪಾಧ್ಯಕ್ಷ ಬಿ.ಎಂ ಸತ್ತಾರ್, ತಾ.ಪಂ ಸದಸ್ಯೆ ನೂರ್ಜಾನ್, ಬೆಳ್ಮ ಗ್ರಾ.ಪಂ ಸದಸ್ಯರಾದ ಯುಸೂಫ್ ಬಾವ, ಕಬೀರ್ ಡಿ, ಅಬ್ದುಲ್ಲ ಎಂ.ಎ, ರಶೀದಾ, ಮರಿಯ್ಯಮ್ಮ, ವಿನೋದ ಶಾಮ್ ಸುಂದರ್, ಕೆ.ಎಚ್ ಹಸೈನಾರ್, ನಾಝ್ಮ, ಸುಹೈಲಾ ಅಕ್ಸ, ಸರ್ಮಿಳ ಜಿ.ಕೆ, ಸುಂದರಿ, ಅಬ್ದುಲ್ ರಝಾಕ್ ಕನೆಕೆರೆ ಉಪಸ್ಥಿತರಿದರು. ಸಂದರ್ಭ ಫಲಾನುಭವಿಗಳಿಗೆ ಗ್ಯಾಸ್ ಸ್ಟಾವ್ ಮತ್ತು ಚೆಕ್ ವಿತರಿಸಲಾಯಿತು.ಭಿವೃದ್ಧಿ ಅಧಿಕಾರಿ ನವೀನ್ ಹೆಗ್ಡೆ ಸ್ವಾಗತಿಸಿದರು. ಬೆಳ್ಮ ಗ್ರಾ.ಪಂ ಸದಸ್ಯ ಉಸ್ಮಾನ್ ಅಕ್ಸ ಕಾರ್ಯಕ್ರಮ ನಿರೂಪಿಸಿದರು. ಕಾರ್ಯದರ್ಶಿ ಬಾಲಕೃಷ್ಣ ವಂದಿಸಿದರು.