ಗೋಡ್ಸೆ ಕೊಂದದ್ದು ಒಬ್ಬರನ್ನು, ರಾಜೀವ್ ಗಾಂಧಿ ಕೊಂದದ್ದು 17,000 ಜನರನ್ನು: ನಳಿನ್ ಕುಮಾರ್ ವಿವಾದಾತ್ಮಕ ಟ್ವೀಟ್
ಮಂಗಳೂರು, ಮೇ 16: ಮಹಾತ್ಮಾ ಗಾಂಧೀಜಿಯವರನ್ನು ಗುಂಡಿಕ್ಕಿ ಕೊಂದ ನಾಥೂರಾಮ್ ಗೋಡ್ಸೆ ಓರ್ವ ದೇಶಭಕ್ತ ಎಂದು ಬಿಜೆಪಿ ಅಭ್ಯರ್ಥಿ ಪ್ರಜ್ಞಾ ಸಿಂಗ್ ವಿವಾದಾತ್ಮಕ ಹೇಳಿಕೆ ನೀಡಿರುವ ನಡುವೆಯೇ ದ.ಕ. ಜಿಲ್ಲಾ ಬಿಜೆಪಿ ಅಭ್ಯರ್ಥಿ ನಳಿನ್ ಕುಮಾರ್ ಕಟೀಲ್ ಇದೇ ವಿಚಾರದಲ್ಲಿ ವಿವಾದಾತ್ಮಕ ಟ್ವೀಟ್ ಒಂದನ್ನು ಮಾಡಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ನಳಿನ್, “ನಾತೂರಾಮ್ ಗೋಡ್ಸೆ ಕೊಂದವರ ಸಂಖ್ಯೆ 1, ಅಜ್ಮಲ್ ಕಸಬ್ ಕೊಂದವರ
ಸಂಖ್ಯೆ 72, ರಾಜೀವ್ ಗಾಂಧಿ ಕೊಂದವರ ಸಂಖ್ಯೆ 17,000, ಈಗ ನೀವೇ ಹೇಳಿ, ಇವರಲ್ಲಿ ಅತೀ ಕ್ರೂರ ಕೊಲೆಗಾರ ಯಾರು?” ಎಂದಿದ್ದಾರೆ.
ಪ್ರಜ್ಞಾ ಸಿಂಗ್ ಹೇಳಿಕೆ ವಿರುದ್ಧ ಈಗಾಗಲೇ ಭಾರೀ ಆಕ್ರೋಶ ವ್ಯಕ್ತವಾಗಿದ್ದು, ಬಿಜೆಪಿಯು ಆಕೆಯ ಹೇಳಿಕೆಯನ್ನು ಖಂಡಿಸಿದೆ. ಇದೀಗ ನಳಿನ್ ಕುಮಾರ್ ಕಟೀಲ್ ಗೋಡ್ಸೆ ಕೊಂದದ್ದು ಒಬ್ಬರನ್ನು ಎನ್ನುವ ಮೂಲಕ ಆತನ ಕೃತ್ಯವನ್ನು ಪರೋಕ್ಷವಾಗಿ ಸಮರ್ಥಿಸುವ ರೀತಿಯ ಟ್ವೀಟ್ ಮಾಡಿ ಹೊಸ ವಿವಾದ ಸೃಷ್ಟಿಸಿದ್ದಾರೆ.
ನಾತೂರಾಮ್ ಗೋಡ್ಸೆ ಕೊಂದವರ
— Chowkidar Nalinkumar Kateel (@nalinkateel) May 16, 2019
ಸಂಖ್ಯೆ 1
ಅಜ್ಮಲ್ ಕಸಬ್ ಕೊಂದವರ
ಸಂಖ್ಯೆ 72
ರಾಜೀವ್ ಗಾಂಧಿ ಕೊಂದವರ
ಸಂಖ್ಯೆ 17,000
ಈಗ ನೀವೇ ಹೇಳಿ
ಇವರಲ್ಲಿ ಅತೀ ಕ್ರೂರ ಕೊಲೆಗಾರ ಯಾರು?