ಕಾಸರಗೋಡು : ನಿಯಂತ್ರಣ ತಪ್ಪಿದ ಜೀಪು ಪಲ್ಟಿ; ಇಬ್ಬರು ಮೃತ್ಯು
ಏಳು ಮಂದಿ ಗಾಯ
ಕಾಸರಗೋಡು : ನಿಯಂತ್ರಣ ತಪ್ಪಿದ ಜೀಪು ಪಲ್ಟಿಯಾದ ಪರಿಣಾಮ ಇಬ್ಬರು ಮೃತಪಟ್ಟು, ಏಳು ಮಂದಿ ಗಾಯಗೊಂಡ ಘಟನೆ ಗುರುವಾರ ರಾತ್ರಿ ಚಟ್ಟಂಚಾಲ್ ನ ಕರಿಚ್ಚೇರಿಯಲ್ಲಿ ನಡೆದಿದೆ.
ಮೃತರನ್ನು ಪಳ್ಳಂಜಿಯ ಶಾರದಾ (68) ಮತ್ತು ಅವರ ಪುತ್ರ ಸುಧೀರ್ ( 42) ಎಂದು ಗುರುತಿಸಲಾಗಿದೆ.
ಸುಧೀರ್ ರ ಪುತ್ರ ನಿರಂಜನ್ (7), ಸಂಬಂಧಿಕ ಸುರೇಶ್ ಗಂಭೀರ ಗಾಯಗೊಂಡಿದ್ದು ಮಂಗಳೂರು ಆಸ್ಪತ್ರೆಗೆ ದಾಖಲಿಸಲಾಗಿದೆ . ಚಾಲಕ ರಂಜಿತ್ (28) , ಚಂದ್ರಿಕಾ ( 33), ಶಿವರಾಜ್ (15), ವಿಸ್ಮಯ ( 13) , ಸುನಿತಾ ಅವರನ್ನು ಕಾಸರಗೋಡು ಆಸ್ಪತ್ರೆಗೆ ದಾಖಲಿಸಲಾಗಿದೆ.
ಗುರುವಾರ ರಾತ್ರಿ ಕರಿಚ್ಚೇರಿ ಇಳಿಜಾರು ರಸ್ತೆಯಲ್ಲಿ ಚಾಲಕನ ನಿಯಂತ್ರಣ ತಪ್ಪಿದ ಜೀಪು ಮಗುಚಿ ಬಿದ್ದು ಈ ಅವಘಡ ನಡೆದಿದೆ.
ಪೊಯಿನಾಚಿ ಪರಂಬದಲ್ಲಿ ನಡೆದ ಸಂಬಂಧಿಕರ ವಿವಾಹ ಸಮಾರಂಭದಲ್ಲಿ ಪಾಲ್ಗೊಂಡು ಮರಳುತ್ತಿದ್ದಾಗ ಅಪಘಾತ ನಡೆದಿದೆ. ಪರಿಸರವಾಸಿಗಳು ಸ್ಥಳಕ್ಕೆ ತಲುಪಿ ಗಾಯಾಳುಗಳನ್ನು ಆಸ್ಪತ್ರೆಗೆ ತಲಪಿಸಿದರೂ, ಇಬ್ಬರು ಮೃತಪಟ್ಟರು .
ವಿದ್ಯಾನಗರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.