ಮಂಗಳೂರು: ಎಸ್ಡಿಎಸಿಯು ನಿಂದ ಇಫ್ತಾರ್ ಕೂಟ
ಮಂಗಳೂರು, ಮೇ 17: ಸೋಶಿಯಲ್ ಡೆಮೋಕ್ರೆಟಿಕ್ ಆಟೋ ಚಾಲಕರ ಯೂನಿಯನ್ ಮಂಗಳೂರು ನಗರ ಸಮಿತಿ ವತಿಯಿಂದ ನಗರದ ಜಿಲ್ಲಾ ಕಚೇರಿಯಲ್ಲಿ ಗುರುವಾರ ಇಫ್ತಾರ್ ಕೂಟ ನಡೆಯಿತು.
ಸಭಾ ಕಾರ್ಯಕ್ರಮದ ಅದ್ಯಕ್ಷತೆಯನ್ನು ಎಸ್ಡಿಎಸಿಯು (ಆಟೋ ಯೂನಿಯನ್) ಮಂಗಳೂರು ನಗರ ಸಮಿತಿ ಅದ್ಯಕ್ಷ ಮಜೀದ್ ಉಳ್ಳಾಲ ವಹಿಸಿದರು.
ಆಲ್ ಇಂಡಿಯಾ ಇಮಾಮ್ಸ್ ಕೌನ್ಸಿಲ್ ರಾಜ್ಯ ಕೋಶಾಧಿಕಾರಿ ರಫೀಕ್ ದಾರಿಮಿ ಕಾರ್ಯಕ್ರಮದ ಉದ್ಘಾಟನೆ ಮಾಡಿ ಮಾತನಾಡಿದ ಅವರು ಮನುಷ್ಯನ ಒಳಿತಿಗಾಗಿ ಸಹಕರಿಸುವುದು ಇಸ್ಲಾಮ್ ಅದೇಶಿಸುತ್ತದೆ. ಈ ನಿಟ್ಟಿನಲ್ಲಿ ಎಸ್ಡಿಎಸಿಯು (ಆಟೋ ಯೂನಿಯನ್) ದ್ಯೇಯ ವಾಕ್ಯವಾದ ಸಮಾಜ ಸೇವೆಗೆ ನಾವು ಜೊತೆಗೂಡಿ ನೀವು ಸಮಾಜಕ್ಕೆ ಮಾದರಿಯಾಗಲಿ ಎಂದು ಹೇಳಿದರು.
ಶಿಕ್ಷಕ, ಉಪಾನ್ಯಾಸಕ ಬ್ಯಾರಿ ಅಕಾಡಮಿಯ ರಿಜಿಸ್ಟ್ರಾರ್ ಮುಹಮ್ಮದ್, ಎಸ್ಡಿಪಿಐ ಪಕ್ಷದ ಜಿಲ್ಲಾದ್ಯಕ್ಷ ಅಥಾವುಲ್ಲ ಜೋಕಟ್ಟೆ, ಕ್ಯಾಂಪಸ್ ಫ್ರಂಟ್ ರಾಷ್ಟ್ರೀಯ ಸಮಿತಿ ಸದಸ್ಯ ತಫ್ಸೀರ್ ಈ ಸಂದರ್ಭದಲ್ಲಿ ಮಾತನಾಡಿದರು. ಎಸ್ಡಿಎಸಿಯು ಜಿಲ್ಲಾಧ್ಯಕ್ಷ ಖಾದರ್ ಫರಂಗಿಪೇಟೆ, ಮಂಗಳೂರು ಸೌತ್ ಸಂಚಾಲಕ ನೌಫಲ್ ಕುದ್ರೋಳಿ ಮತ್ತು ಜಿಲ್ಲಾ ಮತ್ತು ನಗರ ಸಮಿತಿ ಸದಸ್ಯರು ಉಪಸ್ಥಿತರಿದ್ದರು. ಯೂನಿಯನ್ ಜೊತೆ ಕಾರ್ಯದರ್ಶಿ ಹಸನ್ ಮರಕಡ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.