ಬಾಲಕ ಮೆದುಳಿನ ರಕ್ತನಾಳದ ತೊಂದರೆ: ಚಿಕಿತ್ಸೆಗಾಗಿ ದಾನಿಗಳಿಗೆ ಮನವಿ
ಬಂಟ್ವಾಳ : 6 ವರ್ಷ ಪ್ರಾಯದ ಬಾಲಕನೋರ್ವ ಮೆದುಳಿನ ರಕ್ತನಾಳದ ತೊಂದರೆಯಿಂದ ಬಳಲುತ್ತಿದ್ದಾನೆ. ಆಡಿ, ಕುಣಿದಾಡಬೇಕಾದ ವಯಸ್ಸಿನಲ್ಲಿ ಆಸ್ಪತ್ರೆಯಲ್ಲಿ ದಿನ ಕಳೆಯುತ್ತಿದ್ದಾನೆ. ಬಡಕುಟುಂಬದ ತಂದೆ, ತಾಯಿ ಮಗನ ಚಿಕಿತ್ಸೆಗಾಗಿ ಹಣವಿಲ್ಲದೆ ದಾನಿಗಳ ನೆರವಿಗಾಗಿ ಎದುರು ನೋಡುತ್ತಿದ್ದಾರೆ.
ಬಂಟ್ವಾಳ ತಾಲೂಕಿನ ಕೊಯಿಲಾ ಗ್ರಾಮದ ಪಾಂಡವರಗುಡ್ಡೆ ನಿವಾಸಿ ಅನಿಲ್ ಹಾಗೂ ಪವಿತ್ರ ದಂಪತಿ ಪುತ್ರ ಚಿರಾಗ್(6) ಮೆದುಳಿನಿ ರಕ್ತನಾಳದ ತೊಂದರೆಯಿಂದ ಬಳಲುತ್ತಿರುವ ಬಾಲಕ. ಇತ್ತೀಚೆಗೆ ಮನೆಯ ಟೆರೆಸ್ ಮೇಲಿಂದ ಆಕಸ್ಮಿಕವಾಗಿ ಬಿದ್ದ ಬಾಲಕನನ್ನು ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ನೀಡಿದಾಗ ಮೆದುಳಿನ ರಕ್ತನಾಳದ ಸಮಸ್ಯೆಯಿಂದ ಬಳಲುತ್ತಿರುವುದು ಬೆಳಕಿಗೆ ಬಂದಿದೆ. ಪ್ರಸ್ತುತ ಮಂಗಳೂರಿನ ಕೆಎಂಸಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ರೋಗ ಗುಣಮುಖನಾಗಲು ಶಸ್ತ್ರಚಿಕಿತ್ಸೆ ಮಾಡಬೇಕಾದರೆ 10 ಲಕ್ಷ ರೂ. ಖರ್ಚಾಗಲಿದೆ ಎಂದು ವೈದ್ಯರು ತಿಳಿಸಿದ್ದಾರೆ. ಇಷ್ಟೊಂದು ದೊಡ್ಡ ಮೊತ್ತವನ್ನು ಹೊಂದಿಸಲು ಸಾಧ್ಯವಾಗದೇ ಚಿರಾಗ್ ಪೋಷಕರು ಕಂಗಲಾಗಿದ್ದಾರೆ.
ಈ ಬಾಲಕನ ಚಿಕಿತ್ಸೆಗೆ ಸ್ಪಂದಿಸುವ ಮನಸ್ಸುಗಳಿಗಾಗಿ ಕಾಯುತ್ತಿದ್ದಾರೆ. ನೆರವು ನೀಡುವ ಮನಸ್ಸು ನಿಮ್ಮಲ್ಲಿದ್ದರೆ 7026909847 ಸಂಪರ್ಕಿಸಬಹುದು. ನೆರವು ನೀಡುವ ದಾನಿಗಳು ಚಿರಾಗ್ ತಾಯಿ ಪವಿತ್ರ ಅವರ ಬ್ಯಾಂಕ್ ಖಾತೆಗೆ ಹಣ ಜಮಾಯಿಸಬಹುದು.
ಹೆಸರು: ಪವಿತ್ರ ಪಿ.,
ಬ್ಯಾಂಕ್: ಸಿಂಡಿಕೇಟ್, ಬಂಟ್ವಾಳ ಖಾತೆ ಸಂಖ್ಯೆ 01372200106083
ಐಎಫ್ಎಸ್ಸಿ: ಎಸ್ವೈಎನ್ಬಿ0000137