ಉಪ್ಪೂರು: ನಿಂತಿದ್ದ ಲಾರಿಗೆ ಪಿಕ್ಅಪ್ ಢಿಕ್ಕಿ; ಯುವಕ ಮೃತ್ಯು
ನಾಲ್ವರಿಗೆ ಗಂಭೀರ ಗಾಯ
ಬ್ರಹ್ಮಾವರ, ಮೇ 19: ಉಪ್ಪೂರು ಉಡುಪಿ ಡಾಬಾದ ಎದುರುಗಡೆ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಇಂದು ಬೆಳಗಿನ ಜಾವ 3ಗಂಟೆ ಸುಮಾರಿಗೆ ರಸ್ತೆ ಬದಿ ನಿಂತಿದ್ದ ಲಾರಿಗೆ ಪಿಕ್ಅಪ್ ವಾಹನವೊಂದು ಹಿಂದಿನಿಂದ ಢಿಕ್ಕಿ ಹೊಡೆದ ಪರಿಣಾಮ ಓರ್ವ ಮೃತ ಪಟ್ಟು, ನಾಲ್ವರು ಗಂಭೀರಾಗಿ ಗಾಯಗೊಂಡ ಬಗ್ಗೆ ವರದಿಯಾಗಿದೆ.
ಮೃತರನ್ನು ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ಶಿವಪ್ಪ ಹಾಗೂ ಲಕ್ಷ್ಮಮ್ಮ ದಂಪತಿ ಪುತ್ರ ಹನುಮಂತ (21) ಎಂದು ಗುರುತಿಸಲಾಗಿದೆ. ಪಿಕ್ ಅಪ್ ಚಾಲಕ ಅದೇ ಊರಿನ ಶಿವಾನಂದ ಗೊರವರ(22) ಹಾಗೂ ಪಶ್ಚಿಮ ಬಂಗಾಳದ ಶುಭದತ್ ದಂಡುಪಟ್, ಭೀಮನ ದಲಾಯಿ, ಪ್ರದೀಪ ದಲಾಯಿ ಎಂಬವರು ಗಂಭೀರವಾಗಿ ಗಾಯಗೊಂಡು ಮಣಿಪಾಲ ಆ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಇವರು ಮೇ 18ರಂದು ರಾತ್ರಿ ಕೊಟೇಶ್ವರ ಯುವ ಮೆರಿಡಿಯನ್ ಹಾಲ್ ನಲ್ಲಿ ಮದುವೆಯ ಡೆಕೊರೇಶನ್ ಕೆಲಸ ಮುಗಿಸಿ ವಾಪಾಸ್ಸು ಉಡುಪಿಗೆ ಪಿಕಪ್ ವಾಹನದಲ್ಲಿ ಬರುತ್ತಿದ್ದು, ಈ ವೇಳೆ ನಿಯಂತ್ರಣ ತಪ್ಪಿದ ಪಿಕ್ಅಪ್ ಸರ್ವಿಸ್ ರಸ್ತೆಗೆ ಒಳ ಪ್ರವೇಶಿಸಿಸುವ ರಸ್ತೆಯಯಲ್ಲಿ ನಿಲ್ಲಿಸಿದ್ದ ಲಾರಿಗೆ ಹಿಂದಿನಿಂದ ಡಿಕ್ಕಿ ಹೊಡೆಯಿತ್ತೆನ್ನಲಾಗಿದೆ.
ವಾಹನವು ಸಂಪೂರ್ಣ ನುಜ್ಜುಗುಜ್ಜಾಗಿದ್ದು, ಪಿಕ್ಅಪ್ ವಾಹನದ ಎದುರಿ ನಲ್ಲಿ ಕುಳಿತಿದ್ದ ಹನುಮಂತ ಗಂಭೀರವಾಗಿ ಗಾಯಗೊಂಡು ಸ್ಥಳದಲ್ಲೇ ಮೃತ ಪಟ್ಟರೆನ್ನಲಾಗಿದೆ. ಹನುಮಂತಪ್ಪ ಕುಟುಂಬ ಉಡುಪಿ ಬನ್ನಂಜೆಯ ಶನೀಶ್ವರ ದೇವಸ್ಥಾನದ ಬಳಿ ವಾಸವಾಗಿದ್ದು, ಇವರಿಗೆ ಮೂರು ಗಂಡು, ಎರಡು ಹೆಣ್ಣು ಮಕ್ಕಳ ಪೈಕಿ ಹನುಮಂತಪ್ಪ ಕೊನೆಯವರು. ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.