ಹೊಳೆಗೆ ಬಿದ್ದು ಬಾಲಕ ಮೃತ್ಯು
ಬೈಂದೂರು, ಮೇ 19: ಬಾಲಕನೋರ್ವ ಹೊಳೆಗೆ ಕಾಲು ಜಾರಿ ಬಿದ್ದು ಮೃತಪಟ್ಟ ಘಟನೆ ಮೇ 18ರಂದು ಸಂಜೆ ವೇಳೆ ಹೇರಂಜಾಲು ಗ್ರಾಮದ ಕೋಳಕೋಣು ಹಿತ್ಲು ಯಕ್ಷಿ ಎಂಬಲ್ಲಿ ನಡೆದಿದೆ.
ಮೃತರನ್ನು ಹೇರಂಜಾಲು ಉದ್ದಿನಬೆಟ್ಟು ನಿವಾಸಿ ರವಿ ಗಾಣಿಗ ಎಂಬವರ ಮಗ ಧನುಷ್(15) ಎಂದು ಗುರುತಿಸಲಾಗಿದೆ.
ಇವರು ಮನೆ ಸಮೀಪದ ಎಡಮಾವಿನ ಹೊಳೆಯ ಅಂಚಿನಲ್ಲಿ ದನವನ್ನು ವಾಪಾಸ್ಸು ಮನೆ ಕಡೆಗೆ ತರುತ್ತಿರುವಾಗ ಆಕಸ್ಮಿಕವಾಗಿ ಕಾಲು ಜಾರಿ ನೀರಿಗೆ ಬಿದ್ದು ಮೃತಪಟ್ಟಿದ್ದಾರೆ.
ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story