ದೈವಸ್ಥಾನದ ಕಂಪೌಂಡ್ನಲ್ಲಿ ವ್ಯಕ್ತಿಯ ಶವ ಪತ್ತೆ
ಮಂಗಳೂರು, ಮೇ 20: ನಗರದ ಕದ್ರಿ ದೇವಸ್ಥಾನದ ಸಮೀಪದ ಮಲರಾಯ ದೈವಸ್ಥಾನದ ಕಂಪೌಂಡ್ನೊಳಗಡೆ ಅಪರಿಚಿತ ವ್ಯಕ್ತಿಯ ಶವ ಪತ್ತೆಯಾಗಿದೆ.
ಸೋಮವಾರ ಬೆಳಗ್ಗೆ 7:30ಕ್ಕೆ ಮೃತದೇಹ ಕಂಡುಬಂದಿದ್ದು, ಕದ್ರಿ ಪೊಲೀಸರಿಗೆ ವಿಷಯ ತಿಳಿಸಲಾಯಿತು. ಮೃತದೇಹದ ಜತೆ ಬ್ಯಾಗ್ನಲ್ಲಿ ಬ್ರಹ್ಮಕಲಶೋತ್ಸವ ಬಾಬ್ತು ನೀಡಿದ ಬ್ಯಾಜ್ ಇರುವುದು ಕಂಡುಬಂದಿದೆ.
ಮೃತ ಹೊಂದಿದ ವ್ಯಕ್ತಿಯು ಬ್ರಹ್ಮಕಲಶೋತ್ಸವ ಸಂದರ್ಭ ಬಂದಿದ್ದು, ದೇವಸ್ಥಾನದಲ್ಲಿ ವಠಾರದಲ್ಲೇ ಉಳಿದುಕೊಂಡಿದ್ದರು. ಇವರ ಸರಿಯಾದ ವಿಳಾಸ, ದೂರವಾಣಿ ಸಂಖ್ಯೆ ತಿಳಿದು ಬಂದಿಲ್ಲ. ಮೃತ ವ್ಯಕ್ತಿ ಯಾವುದೋ ಕಾಯಿಲೆಯಿಂದ ಮೃತಪಟ್ಟಿರಬಹುದು ಎಂದು ಶಂಕಿಸಲಾಗಿದೆ. ಈ ಕುರಿತು ಮಂಗಳೂರು ಪೂರ್ವ (ಕದ್ರಿ) ಪೊಲೀಸ್ ಠಾಣೆಯಲ್ಲಿ ಸಂಶಯಾಸ್ಪದ ಸಾವು ಪ್ರಕರಣ ದಾಖಲಾಗಿದೆ.
ಅಸ್ಪಷ್ಟ ಮಾಹಿತಿ: ಮೃತನ ಬಳಿ ದೊರೆತ ದಾಖಲೆ ಪ್ರಕಾರ ಈತ ಉಡುಪಿ ಅಂಬಲಪಾಡಿಯ ಬಳಿಯವನೆಂದು ತಿಳಿದು ಬಂದಿದೆಯಾದರೂ ಈ ಬಗ್ಗೆ ಯಾವುದೇ ಸ್ಪಷ್ಟ ಮಾಹಿತಿ ಸಿಕ್ಕಿಲ್ಲ. ಮೃತದೇಹದ ವಾರಸುದಾರರಿದ್ದಲ್ಲಿ ನಗರ ಕಂಟ್ರೋಲ್ ರೂಂ ಅಥವಾ ಕದ್ರಿ ಪೊಲೀಸ್ ಠಾಣೆಯನ್ನು ಸಂಪರ್ಕಿಸಬಹುದು.