ಬಂಟ್ವಾಳ: ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿ; ನಾಲ್ವರಿಗೆ ಗಾಯ
ಬಂಟ್ವಾಳ : ಚಾಲಕನ ನಿಯಂತ್ರಣ ತಪ್ಪಿದ ಕಾರೊಂದು ರಸ್ತೆಯ ವಿಭಕಕ್ಕೆ ಢಿಕ್ಕಿ ಹೊಡೆದ ಪರಿಣಾಮ ಕಾರು ಪಲ್ಟಿಯಾಗಿ ನಾಲ್ವರು ಗಾಯ ಗೊಂಡ ಘಟನೆ ರಾಷ್ಟ್ರೀಯ ಹೆದ್ದಾರಿಯ ಬಿ.ಸಿ.ರೋಡ್ ತಲಪಾಡಿಯಲ್ಲಿ ಮಂಗಳವಾರ ಸಂಭವಿದೆ.
ಅಪಘಾತದಿಂದ ಗಾಯಗೊಂಡವರು ಮಂಗಳೂರಿನ ನಿವಾಸಿಗಳಾಗಿದ್ದು, ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ.
ಬಿ.ಸಿ.ರೋಡ್ ನಿಂದ ಮಂಗಳೂರು ಕಡೆಗೆ ತೆರಳುತ್ತಿದ್ದಾಗ ಬೆಂಗಳೂರು-ಮಂಗಳೂರು ರಾಷ್ಟ್ರೀಯ ಹೆದ್ದಾರಿಯ ಬಿ.ಸಿ.ರೋಡ್ ತಲಪಾಡಿಯ ಕೆಇಬಿ ಸಮೀಪ ಅಪಾಯಕಾರಿ ತಿರುವು ಬಳಿ ಕಾರು ಚಾಲಕನ ನಿಯಂತ್ರಣ ತಪ್ಪಿ ರಸ್ತೆಯ ವಿಭಜಕಕ್ಕೆ ಢಿಕ್ಕಿಯಾಗಿದೆ. ಬಳಿಕ ಮುಂದಕ್ಕೆ ಚಲಿಸಿದ ಕಾರು ರಸ್ತೆ ಮಧ್ಯೆ ಪಲ್ಟಿಯಾಗಿದೆ.
ಅಪಘಾತ ಶಬ್ದ ಕೇಳಿಸುತ್ತಿದ್ದಂತೆ ತಲಪಾಡಿ ಮಸೀದಿಯ ಆವರಣದಲ್ಲಿ ಇಫ್ತಾರ್ ಕೂಟದಲ್ಲಿದ್ದವರು ಸ್ಥಳಕ್ಕೆ ಓಡಿ, ಕಾರಿನಲ್ಲಿ ಸಿಲುಕಿಕೊಂಡಿದ್ದ ಗಾಯಾಳುಗಳನ್ನು ಆಸ್ಪತ್ರೆ ಸಾಗಿಸು ಮೂಲಕ ಸಮಯ ಪ್ರಜ್ಞೆ ಮೆರೆದರು.
ರಸ್ತೆಯ ಮಧ್ಯೆ ಪಲ್ಟಿಯಾದ ಕಾರನ್ನು ಸ್ಥಳೀಯರೆಲ್ಲರು ಸೇರಿ ತೆರವುಗೊಳಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದಾರೆ.