ಪ್ರಧಾನ ಮಂತ್ರಿ ಸಾಮಾಜಿಕ ಸುರಕ್ಷಾ ಯೋಜನೆಯಡಿ 987 ಪ್ರಕರಣಗಳಲ್ಲಿ ಪರಿಹಾರ
ಮಂಗಳೂರು, ಮೇ 24 : ಪ್ರಧಾನ ಮಂತ್ರಿ ಜೀವನ ಜ್ಯೋತಿ ಭಿಮಾ ಯೋಜನೆ ಮತ್ತು ಪ್ರಧಾನ ಮಂತ್ರಿ ಸುರಕ್ಷ ವಿಮಾ ಯೋಜನೆಯಡಿ 2018-19ನೆ ಸಾಲಿನಲ್ಲಿ ಕಾರ್ಪೊರೇಶನ್ ಬ್ಯಾಂಕ್ 987 ಪ್ರಕರಣಗಳಲ್ಲಿ ಪರಿಹಾರ ನೀಡಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.
ಪ್ರಧಾನ ಮಂತ್ರಿ ಜೀವನ ಜ್ಯೋತಿ ಭಿಮಾ ಯೋಜನೆ ಯಡಿಯಲ್ಲಿ ವಾರ್ಷಿಕ 330 ಪ್ರೀಮಿಯಂ ಪಾವತಿಸುವ 18ರಿಂದ 50 ವರ್ಷದೊಳಗಿನ ವ್ಯಕ್ತಿಗೆ ವಿಮಾ ಸವಲಭ್ಯ ದೊರೆಯುತ್ತದೆ. ಪ್ರಧಾನ ಮಂತ್ರಿ ಸುರಕ್ಷ ವಿಮಾ ಯೋಜನೆಯಡಿ ವಾರ್ಷಿಕ 12 ರೂ ಪಾವತಿಸುವ 18ರಿಂದ 70 ವರ್ಷದೊಳಗಿನ ವ್ಯಕ್ತಿಗಳಿಗೆ ಅಪಘಾತ ವಿಮಾ ಸವಲಬ್ಯ ದೊರೆಯುತ್ತದೆ. 2018-19 ನೆಸಾಲಿನಲ್ಲಿ 211 ಪ್ರಕರಣಗಳಲ್ಲಿ ಈ ಯೋಜನೆಯಡಿ ವಿಮಾ ಸೌಲಭ್ಯದ ನೆರವು ನೀಡಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.
Next Story