ಪಡುಬಿದ್ರಿ: ಮನೆಯ ಗೋಡೆಯ ಕಲ್ಲು ಬಿದ್ದು ಕಾರ್ಮಿಕ ಮೃತ್ಯು
ಪಡುಬಿದ್ರಿ: ಮನೆಯ ಕೆಲಸದ ವೇಳೆ ಗೋಡೆಯ ಕಲ್ಲು ಬಿದ್ದು ಕಾರ್ಮಿಕನೋರ್ವ ಸಾವನ್ನಪ್ಪಿದ ಘಟನೆ ಸೋಮವಾರ ಎಲ್ಲೂರಿನಲ್ಲಿ ನಡೆದಿದೆ.
ಮೃತರನ್ನು ಶಂಕರ ಮೂಲ್ಯ (56) ಎಂದು ಗುರುತಿಸಲಾಗಿದೆ. ಇವರು ತನ್ನ ಜೊತೆಗಾರರೊಂದಿಗೆ ಎಲ್ಲೂರಿನ ಕುಂಜೂರು ಪ್ರೇಮಮಾಥ್ ಶೆಟ್ಟಿ ಎಂಬವರ ಹಳೆ ಮನೆಯ ದುರಸ್ತಿ ಕೆಲಸ ಮಾಡುತ್ತಿದ್ದರು. ಈ ವೇಳೆ ಗೋಡೆಯ ಕೆಲಸ ನಡೆಯುತ್ತಿದ್ದಾಗ ಕಲ್ಲು ಬಿದ್ದು, ಗಂಭೀರ ಗಾಯಗೊಂಡಿದ್ದು, ಬಳಿಕ ಮೃತಪಟ್ಟರು. ಪ್ರಕರಣ ಪಡುಬಿದ್ರಿ ಠಾಣೆಯಲ್ಲಿ ದಾಖಲಾಗಿದೆ.
Next Story