ಜುಗಾರಿ: ಐವರ ಬಂಧನ
ಗಂಗೊಳ್ಳಿ, ಮೇ 28: ಹೊಸಾಡು ಗ್ರಾಮದ ಭಗತ್ ನಗರ ಎಂಬಲ್ಲಿರುವ ಹಾಡಿಯಲ್ಲಿ ಮೇ 27ರಂದು ಸಂಜೆ 6ಗಂಟೆ ಸುಮಾರಿಗೆ ಇಸ್ಪೀಟು ಜುಗಾರಿ ಆಡುತ್ತಿದ್ದ ಐವರನ್ನು ಗಂಗೊಳ್ಳಿ ಪೊಲೀಸರು ಬಂಧಿಸಿದ್ದಾರೆ.
ರಾಘವೇಂದ್ರ ಖಾರ್ವಿ, ಸದಾನಂದ ಖಾರ್ವಿ, ಜಯರಾಮ ಖಾರ್ವಿ, ವೆಂಕಪ್ಪಖಾರ್ವಿ, ನಾಗರಾಜ ಖಾರ್ವಿ ಬಂಧಿತ ಆರೋಪಿಗಳು. ಇವರಿಂದ 830ರೂ. ನಗದು ವಶಪಡಿಸಿಕೊಳ್ಳಲಾಗಿದೆ. ಜುಗಾರಿ ಆಡುತ್ತಿದ್ದ ಸತೀಶ, ವಿವೇಕ, ಸುರೇಶ, ಸತೀಶ, ಸುಧಾಕರ ಎಂಬವರು ಓಡಿಹೋಗಿದ್ದಾರೆ.
ಈ ಬಗ್ಗೆ ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story