ಬಸ್ ಡಿಕ್ಕಿ; ಬೈಕ್ ಸವಾರ ಮೃತ್ಯು
ಕಾರ್ಕಳ, ಜೂ.6: ಗುರುವಾರ ಬೆಳಗ್ಗೆ ಸಾಣೂರು ಗ್ರಾಮದ ರಾಮಮಂದಿರದ ಎದುರಿನ ರಾ.ಹೆದ್ದಾರಿ 169 ಮೂಡಬಿದ್ರೆ-ಕಾರ್ಕಳ ರಸ್ತೆಯ ಗುಬೆಟ್ಟು ಕ್ರಾಸ್ ಬಳಿ ರಸ್ತೆ ಬದಿ ತನ್ನ ಮೋಟಾರು ಸೈಕಲ್ನಲ್ಲಿ ಕುಳಿತಿದ್ದ ಅನಿಲ್ ಎಂಬವರಿಗೆ ಮೂಡಬಿದ್ರೆ ಕಡೆಯಿಂದ ವೇಗವಾಗಿ ಬಂದ ರಾಜ್ಯ ರಸ್ತೆ ಸಾರಿಗೆ ಬಸ್ಸೊಂದು ಡಿಕ್ಕಿ ಹೊಡೆದು, ಗಂಭೀರವಾಗಿ ಗಾಯಗೊಂಡ ಅನಿಲ್ ಅವರನ್ನು ಆಸ್ಪತ್ರೆಗೆ ಸಾಗಿಸುವ ವೇಳೆ ಮೃತಪಟ್ಟಿದ್ದಾರೆ.
ಈ ಬಗ್ಗೆ ಕಾರ್ಕಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
Next Story