ಅಕ್ರಮ ಜಾನುವಾರು ಸಾಗಾಟ: ಆರೋಪಿಗಳಿಗೆ ಶಿಕ್ಷೆಯಾಗಲಿ
ಉಡುಪಿ, ಜೂ. 8: ಮುಂಡಾಜೆಯಲ್ಲಿ ಅಕ್ರಮವಾಗಿ ದನಗಳನ್ನು ಸಾಗಿಸುವಾಗ ಕಾರು ಪಲ್ಟಿಯಾಗಿ ನಾಲ್ಕು ದನಗಳು ಸತ್ತಿರುವುದಕ್ಕೆ ಎಂತಹ ಕಲ್ಲು ಮನಸ್ಸು ಕೂಡ ಕರಗಬಹುದು. ಸಣ್ಣ ಕಾರಿನಲ್ಲಿ ಅಲ್ಲಾಹನ ಜೀವಿಯಾದ ದನಗಳನ್ನು ಸಾಗಿಸುವ ಮೂಲಕ ಅದಕ್ಕೆ ಚಿತ್ರಹಿಂಸೆ ನೀಡಿದವರು ಅಲ್ಲಾಹನ ಕೋಪಕ್ಕೆ ತುತ್ತಾಗುವುದರಲ್ಲಿ ಸಂದೇಹವಿಲ್ಲ ಎಂದು ಕರ್ನಾಟಕ ಮುಸ್ಲಿಂ ಜಮಾಅತ್ನ ಉಡುಪಿ ಜಿಲ್ಲಾ ಸಂಚಾಲಕ ಕೆ.ಎ. ಅಬ್ದುರ್ರಹ್ಮಾನ್ ರಝ್ವಿ ಕಲ್ಕಟ್ಟ ತಿಳಿಸಿದ್ದಾರೆ.
ಈ ಕೃತ್ಯ ಎಸಗಿದ ಯಾರೇ ಆದರೂ ಅವರಿಗೆ ಸರಿಯಾದ ಶಿಕ್ಷೆಯಾಗಬೇಕು. ಸತ್ತ ದನಗಳ ಮಾಂಸವನ್ನು ತಿನ್ನಿಸುವುದು ಘೋರ ಅಪರಾಧ ವಾಗಿದೆ. ಈ ಬಗ್ಗೆ ಸಮುದಾಯವರು ಜಾಗರೂಕರಾಗಬೇಕಾಗಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Next Story