ಮಂಗಳಾ ಬ್ಯಾಡ್ಮಿಂಟನ್ ಅಸೋಸಿಯೇಷನ್ ಅಧ್ಯಕ್ಷರಾಗಿ ಸಿ.ಎಸ್. ಭಂಡಾರಿ ಆಯ್ಕೆ
ಮಂಗಳೂರು: ಮಂಗಳಾ ಬ್ಯಾಡ್ಮಿಂಟನ್ ಅಸೋಸಿಯೇಷನ್ ನ 2019-20 ರ ಅವಧಿಗೆ ಅಧ್ಯಕ್ಷರಾಗಿ ಸಿ.ಎಸ್. ಭಂಡಾರಿ ಆಯ್ಕೆ ಗೊಂಡಿರುತ್ತಾರೆ.
ನಗರದ ಕುಡ್ಲ ಹೋಟೆಲ್ ನಲ್ಲಿ ನಡೆದ ವಾರ್ಷಿಕ ಮಹಾಸಭೆಯಲ್ಲಿ ಕಾರ್ಯದರ್ಶಿಯಾಗಿ ದೀಪಕ್ ಕುಮಾರ್, ಉಪಾಧ್ಯಕ್ಷರುಗಳಾಗಿ ಶಿವಪ್ರಸಾದ್ ಪ್ರಭು ಮತ್ತು ಶಿವಾನಂದ್ ಶೆಣೈ, ಕ್ರೀಡಾ ಸಮಿತಿಯ ಸಂಚಾಲಕರಾಗಿ ರಿಯಾಝ್, ಅಭಿವೃದ್ಧಿ ಸಮಿತಿಗೆ ಸುಪ್ರೀತ್ ಆಳ್ವ, ಸಂಘಟನಾ ಕಾರ್ಯದರ್ಶಿಯಾಗಿ ದೇವದಾಸ್, ಜೊತೆ ಕಾರ್ಯದರ್ಶಿಯಾಗಿ ಸುಮಿತ್ ನಾಯಕ್, ಖಜಾಂಜಿಯಾಗಿ ಲಕ್ಷ್ಮಿ. ಪಿ. ಸುವರ್ಣ ಮತ್ತು ಕಾರ್ಯಕಾರಿ ಸಮಿತಿ ಗೆ ಎ.ಕೆ. ನಿಯಾಝ್, ಸಂತೋಷ್ ಕುಮಾರ್ ಶೆಟ್ಟಿ, ಎ.ಎಸ್. ವೆಂಕಟೇಶ್, ಅಬಿದ್ ಆಲಿ, ಅಶೋಕ್ ಹೆಗ್ಡೆ, ಅನಿಲ್ ರಾವ್, ನೂರ್ ಮುಹಮ್ಮದ್, ಗಿರಿಧರ್ ಕೋಟ್ಯಾನ್, ಗೌರವ ಅಧ್ಯಕ್ಷ ರಾಗಿ ಶ್ರೀ ಎ. ಸದಾನಂದ ಶೆಟ್ಟಿಯವರು ಮರು ಆಯ್ಕೆ ಗೊಂಡಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.
Next Story