ಗ್ರಾಪಂ ಸದಸ್ಯತ್ವಕ್ಕೆ ಎನ್.ನವೀನ್ಚಂದ್ರ ಶೆಟ್ಟಿ ರಾಜೀನಾಮೆ
ಬ್ರಹ್ಮಾವರ, ಜೂ.14: ಬಿಲ್ಲಾಡಿ ಗ್ರಾಮ ಪಂಚಾಯತ್ನ ಮಾಜಿ ಅಧ್ಯಕ್ಷ ಎನ್.ನವೀನ್ಚಂದ್ರ ಶೆಟ್ಟಿ ತನ್ನ ಸದಸ್ಯ ಸ್ಥಾನಕ್ಕೆ ಗುರುವಾರ ರಾಜೀನಾಮೆ ನೀಡಿದ್ದಾರೆ.
ಗ್ರಾಪಂನ ಆಡಳಿತದಲ್ಲಿ ಪಾರದರ್ಶಕತೆ ಮತ್ತು ಪ್ರಾಮಾಣಿಕತೆಯ ಕೊರತೆ ಯಿಂದ ಪಂಚಾಯತ್ ಸದಸ್ಯನಾಗಿ ಮುಂದುವರಿಯಲು ನನ್ನ ನೈತಿಕತೆ ಒಪ್ಪುವುದಿಲ್ಲ. ಆದುದರಿಂದ ಸದಸ್ಯತ್ವಕ್ಕೆ ತತ್ಕ್ಷಣದಿಂದ ಜಾರಿಗೆ ಬರುವಂತೆ ರಾಜೀನಾಮೆ ನೀಡಿದ್ದೇನೆ ಎಂದು ಪಂಚಾಯತ್ ಅಭಿವೃದ್ಧಿ ಅಧಿಕಾರಿಗೆ ಸಲ್ಲಿಸಿ ರುವ ರಾಜೀನಾಮೆ ಪತ್ರದಲ್ಲಿ ನವೀನ್ಚಂದ್ರ ಶೆಟ್ಟಿ ತಿಳಿಸಿದ್ದಾರೆ.
ಇವರು 2015 ಮೇ 29ರಂದು ಬಿಲ್ಲಾಡಿ ಗ್ರಾಪಂ ನಡೆದ ಚುನಾವಣೆಯಲ್ಲಿ ಸದಸ್ಯರಾಗಿ ಆಯ್ಕೆಗೊಂಡಿದ್ದು, ಮೂರುವರೆ ವರ್ಷಕ್ಕೂ ಅಧಿಕ ಕಾಲ ಅಧ್ಯಕ್ಷರಾಗಿದ್ದರು.
Next Story