ಛಾಯಾ ಹರಿಹರಪುರ ನಿಧನ
ಉಡುಪಿ, ಜೂ.15: ಉಡುಪಿ ನಗರಸಭೆಯ ಸದಸ್ಯ ಮಂಜುನಾಥ ಮಣಿಪಾಲ ಇವರ ಪತ್ನಿ ಛಾಯಾ ಹರಿಹರಪುರ (48) ಇವರು ದೀರ್ಘಕಾಲದ ಅಸ್ವಸ್ಥತೆಯಿಂದ ಶನಿವಾರ ಮಣಿಪಾಲ ಕಸ್ತೂರ್ಬಾ ಆಸ್ಪತ್ರೆಯಲ್ಲಿ ನಿಧನರಾದರು.
ಇವರು 20 ವರ್ಷಗಳ ಕಾಲ ಮಂಗಳೂರಿನ ನಬಾರ್ಡ್ ಬ್ಯಾಂಕಿನ ಉದ್ಯೋಗಿಯಾಗಿದ್ದು ಸ್ವಯಂನಿವೃತ್ತಿ ಪಡೆದಿದ್ದರು. ಸಾಹಿತ್ಯ ಚಟುವಟಿಕೆಗಳಲ್ಲಿ ತನ್ನನ್ನು ತೊಡಗಿಸಿಕೊಂಡಿದ್ದ ಛಾಯಾ ಹಲವಾರು ಕವನಗಳನ್ನು ರಚಿಸಿದ್ದರು. ಇವರು ಪತಿ, ಪುತ್ರ, ಸಹೋದ, ಸಹೋದರಿಯರನ್ನು ಅಗಲಿದ್ದಾರೆ.
Next Story