ಪ.ಪಂಗಡದ ಆದಿವಾಸಿ ಜನಾಂಗದಿಂದ ಅರ್ಜಿ ಆಹ್ವಾನ
ಉಡುಪಿ, ಜೂ.17: ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದಿಂದ ಪರಿಶಿಷ್ಟ ಪಂಗಡಕ್ಕೆ ಸೇರಿದ ಆದಿವಾಸಿ ಜನಾಂಗದವರಾದ ಕೊರಗ, ಮಲೆಕುಡಿಯ ಉಪಜಾತಿಯವರು ಈ ಕೆಳಗೆ ಕಾಣಿಸಿದ ಉದ್ದೇಶಕ್ಕೆ ಸೌಲ್ಯ ಪಡೆಯಲು ಅರ್ಜಿ ಆಹ್ವಾನಿಸಲಾಗಿದೆ.
ಹಣ್ಣು ಮತ್ತು ತರಕಾರಿ ಮಾರಾಟ ಮಳಿಗೆಗಳ ಸ್ಥಾಪನೆ, ಹಣ್ಣು ಮತ್ತು ತರಕಾರಿಯನ್ನು ಸಾಗಾಣಿಕೆ ಮಾಡಲು ಅಲ್ಪ ಅಶ್ವಶಕ್ತಿಯುಳ್ಳ ಸಾರಿಗೆ ವಾಹನ ಖರೀದಿ, ಪವರ್ ಟಿಲ್ಲರ್, ಮಿನಿ ಟ್ರಾಕ್ಟರ್, ಹಾರ್ವೆಸ್ಟಿಂಗ್ ಮಿಷನ್, ಸಿಡ್ ಡಿಕೋರ್ಟಿಕೇಡರ್ಸ್ ಖರೀದಿ ಮತ್ತು ತೋಟಗಾರಿಕೆ ನರ್ಸರಿ ಸ್ಥಾಪನೆ, ಕೋಳಿ ಮಾರಾಟ ಮಳಿಗೆ ಸ್ಥಾಪನೆ, ಕೋಳಿ ಉತ್ಪಾದನಾ ಘಟಕ ಅಭಿವೃದ್ಧಿ ಕಾರ್ಯ, ಮೀನು ಮಾರಾಟ ಮಳಿಗೆ ಸ್ಥಾಪನೆ, ಮೀನು ಸಾಗಾಣಿಕೆಗಾಗಿ ಶೀತಲ ಪೆಟ್ಟಿಗೆ ಅಳವಡಿಸಿದ ದ್ವಿಚಕ್ರ ವಾಹನ ಖರೀದಿ, ಹಣ್ಣು ಮತ್ತು ತರಕಾರಿ ಸಂರಕ್ಷಿಸಿಡಲು ಶೀತಲ ಪೆಟ್ಟಿಗೆ ಖರೀದಿ. ನೇರಸಾಲ/ಹೈನುಗಾರಿಕೆ ಮುಂತಾದ ಉದ್ದೇಶಕ್ಕೆ ಸೌಲಭ್ಯ ನೀಡಲಾಗುವುದು.
ಅರ್ಜಿ ಸಲ್ಲಿಸಲು ಜು.5 ಕೊನೆಯ ದಿನವಾಗಿದೆ. ಅರ್ಜಿ ಹಾಗೂ ಹೆಚ್ಚಿನ ವಿವರಗಳಿಗೆ ದೂರವಾಣಿ ಸಂಖ್ಯೆ:0820-2574884ನ್ನು ಸಂಪರ್ಕಿಸುವಂತೆ ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕರ ಪ್ರಕಟಣೆ ತಿಳಿಸಿದೆ.