ಹಾವಂಜೆ: ಮದ್ಮಲ್ ಕೆರೆ ಸ್ವಚ್ಛತೆ
ಉಡುಪಿ, ಜೂ.20: ಹಾವಂಜೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಮದ್ಮಲ್ ಕೆರೆಯನ್ನು ಪಂಚಾಯತ್ ವತಿಯಿಂದ ಇಂದು ಸ್ವಚ್ಛಗೊಳಿಸಲಾಯಿತು. ಪಂಚಾಯತ್ ಅಭಿವೃದ್ಧಿ ಅಧಿಕಾರಿ ಆರುಂಧತಿ ಯೇಸುಮನೆ ಮುತು ವರ್ಜಿಯಿಂದ ಕೆರೆಗೆ ಈ ಹಿಂದೆ ಬಿದ್ದಿದ್ದ ಬೃಹತ್ ಮರದ ದಿಮ್ಮಿಯನ್ನು ಕ್ರೇನ್ ಮೂಲಕ ಎತ್ತಲಾಯಿತು.
ಆ ಮೂಲಕ ಇಡೀ ಕೆರೆಯನ್ನು ಸ್ವಚ್ಚಗೊಳಿಸುವ ಕಾರ್ಯ ನಡೆಸಲಾಯಿತು.
ಈ ಸಂದರ್ಭದಲ್ಲಿ ಹಾವಂಜೆ ಗ್ರಾಪಂ ಉಪಾಧ್ಯಕ್ಷ ಸತೀಶ್ ಶೆಟ್ಟಿ, ಮಾಜಿ ಅಧ್ಯಕ್ಷ ಉದಯ ಕೋಟಿಯನ್, ಪಂಚಾಯತ್ ಸಿಬ್ಬಂದಿಗಳಾದ ಸದಾಶಿವ ಕೊಳಲಗಿರಿ, ಪವಿತ್ರ, ಸ್ಥಳೀಯರಾದ ಜಯಶೆಟ್ಟಿ ಬನ್ನಂಜೆ, ವಾಲ್ಟೇರ್ ಡಿಸೋಜ ಕೊಳಗಿರಿ, ಸೀತಾರಾಮ ಶೆಟ್ಟಿ ಕೀಲಿಂಜೆ, ಕುಶಲ ಪೂಜಾರಿ ಶೆಟ್ಟಿ ಕೀಲಿಂಜೆ, ಸಾಮಾಜಿಕ ಕಾರ್ಯಕರ್ತ ಗಣೇಶ್ರಾಜ್ ಸರಳೆಬೆಟ್ಟು ಹಾಜರಿದ್ದರು.
Next Story