ಜುಗಾರಿ: ಆರು ಮಂದಿ ಬಂಧನ
ಕುಂದಾಪುರ, ಜೂ.20: ವಡೇರಹೋಬಳಿ ಗ್ರಾಮದ ಟಿಟಿ ರಸ್ತೆಯ ನೀರಿನ ಟ್ಯಾಂಕ್ ಬಳಿ ಜೂ.20ರಂದು ಅಪರಾಹ್ನ ವೇಳೆ ಅಂದರ್ ಬಾಹರ್ ಜುಗಾರಿ ಆಡುತ್ತಿದ್ದ ಆರು ಮಂದಿಯನ್ನು ಕುಂದಾಪುರ ಪೊಲೀಸರು ಬಂಧಿಸಿದ್ದಾರೆ.
ಸ್ಥಳೀಯ ನಿವಾಸಿಗಳಾದ ಉಮೇಶ(40), ಸುರೇಶ(38), ಸಂದೀಪ (30), ಚತುರ(28), ಪ್ರದೀಪ(33), ಚರಣ್(22) ಬಂಧಿತ ಆರೋಪಿಗಳು. ಇವರಿಂದ 2,640ರೂ. ನಗದು ವಶಪಡಿಸಿಕೊಳ್ಳಲಾಗಿದೆ. ಈ ಬಗ್ಗೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story