ಬಿರುವೆರ್ ಕುಡ್ಲ ಸಂಘಟನೆಯ ವತಿಯಿಂದ ಆರ್ಥಿಕ ನೆರವು
ಬಳ್ಳಾಲ್ಬಾಗ್,ಜೂ.22: ಬಾವಿ ನೀರು ಸೇದುವ ಸಂದರ್ಭ ಅನಿರೀಕ್ಷಿತವಾಗಿ ಬಿದ್ದು ಅನಾರೋಗ್ಯಕ್ಕೀಡಾಗಿ ಇದೀಗ ಮಲಗಿದ ಸ್ಥಿತಿಯಲ್ಲೇ ಜೀವನ ನಡೆಸಬೇಕಾದ ಹಿರಿಯ ಸದಸ್ಯ ಮಿಜಾರಿನ ಕೃಷ್ಣ ಪೂಜಾರಿ (72)ಗೆ ಫ್ರೆಂಡ್ಸ್ ಬಳ್ಳಾಲ್ಬಾಗ್ ಬಿರುವೆರ್ ಕುಡ್ಲ ಸಂಘಟನೆಯ ವತಿಯಿಂದ 40 ಸಾವಿರ ರೂ.ಸಹಾಯ ಧನ ವಿತರಿಸಲಾಯಿತು.
ಈ ಸಂದರ್ಭ ಬಿರುವೆರ್ ಕುಡ್ಲ ಸ್ಥಾಪಕಾಧ್ಯಕ್ಷ ಉದಯ್ ಪೂಜಾರಿ ಬಳ್ಳಾಲ್ಬಾಗ್, ಅಧ್ಯಕ್ಷ ರಾಕೇಶ್ ಬಳ್ಳಾಲ್ಬಾಗ್, ಕಿಶೋರ್ ಬಾಬು, ಭರತ್ ಬಂಗೇರ, ಪ್ರಾಣೇಶ್ ಬಂಗೇರ, ಕಿರಣ್ ಉರ್ವ,ರೋಶನ್ ಬಳ್ಳಾಲ್ಬಾಗ್, ಯಶ್ವಿನ್ ಬಳ್ಳಾಲ್ಬಾಗ್,ಓಝಿ ಪದವಿನಂಗಡಿ,ಚೇತನ್ ಗೌಡ,ದೀಕ್ಷಿತ್ ಪೂಜಾರಿ,ವಿಘ್ನೇಶ್ ಚಿಲಿಂಬಿ, ಸಾಗರ್ ಅಶೋಕ್ನಗರ, ದಿನೇಶ್ ಮಿಜಾರ್ ಮತ್ತಿತರರು ಉಪಸ್ಥಿತರಿದ್ದರು.
Next Story