ಕಡಂಬಾರ್: ಎಕ್ಸ್ಪ್ಲೋರರ್ ಸ್ಕೂಲ್ ವತಿಯಿಂದ ಪರಿಸರ ದಿನಾಚರಣೆ
ಮಂಜೇಶ್ವರ : ಕಡಂಬಾರ್ ಎಕ್ಸ್ಪ್ಲೋರರ್ ಸ್ಕೂಲ್ ವತಿಯಿಂದ ಶನಿವಾರ ಪರಿಸರ ದಿನವನ್ನು ಆಚರಿಸಲಾಯಿತು.
ಮಂಜೇಶ್ವರ ಕಡಲ ತೀರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಂಜೇಶ್ವರ ವೈದ್ಯಾಧಿಕಾರಿ ಶೈನಾ ಪರಿಸರ ಮತ್ತು ಪರಿಸರ ರಕ್ಷಣೆಯ ಮಹತ್ವದ ಬಗ್ಗೆ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು.
ಶಾಲಾ ಸಂಸ್ಥಾಪಕರು, ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಕಡಲ ತೀರವನ್ನು ಸ್ವಚ್ಛಗೊಳಿಸಿ ಗಿಡಗಳನ್ನು ನೆಟ್ಟರು. ಈ ಸಂದರ್ಭ ಶಾಲೆಯ ಮುಖ್ಯ ಶಿಕ್ಷಕಿ ಪೂರ್ಣಿಮ್ ಎಸ್.ರೈ ಸ್ವಾಗತಿಸಿ, ಸಹ ಶಿಕ್ಷಕಿ ಕಲಾವತಿ ವಂದಿಸಿದರು.