ಬಂಡಿಕೊಟ್ಯ ಬ್ರಹ್ಮಶ್ರೀ ನಾರಾಯಣ ಗುರು ಬಿಲ್ಲವ ಸೇವಾ ಸಂಘ ಮಹಿಳಾ ವಿಭಾಗ: ಅಧ್ಯಕ್ಷರಾಗಿ ಹರಿಣಾಕ್ಷಿ ಹೇಮಂತ್
ಉಳ್ಳಾಲ: ಉಳ್ಳಾಲ ಬಂಡಿಕೊಟ್ಯ ಬ್ರಹ್ಮಶ್ರೀ ನಾರಾಯಣ ಗುರು ಬಿಲ್ಲವ ಸೇವಾ ಸಂಘ ಮಹಿಳಾ ವಿಭಾಗದ ನೂತನ ಅಧ್ಯಕ್ಷರಾಗಿ ಹರಿಣಾಕ್ಷಿ ಹೇಮಂತ್ ಆಯ್ಕೆಯಾಗಿದ್ದಾರೆ.
ಗೌರವಾಧ್ಯಕ್ಷರಾಗಿ ಪ್ರಭಾವತಿ ವಿಶ್ವನಾಥ ಬಂಡಿಕೊಟ್ಯ, ದೇವಕಿ ಆರ್. ಉಳ್ಳಾಲ್, ಉಪಾಧ್ಯಕ್ಷರಾಗಿ ಯಶೋಧ ಪುರುಷೋತ್ತಮ, ಪೂರ್ಣಿಮಾ ಚಂದ್ರಹಾಸ್, ಪ್ರಧಾನ ಕಾರ್ಯದರ್ಶಿಯಾಗಿ ಶೋಭ ಗೋಪಾಲ ಕೊಟ್ಟಾರ, ಜೊತೆ ಕಾರ್ಯದರ್ಶಿಯಾಗಿ ರೂಪ ನಾಗರಾಜ ಧರ್ಮನಗರ, ಗೀತಾ ಸಂಜೀವ ಗೋಳಿಯಡಿ, ಸಂಘಟನಾ ಕಾರ್ಯದರ್ಶಿ ಲೀಲಾವತಿ ಮಾಧವ ಧರ್ಮನಗರ, ಲಕ್ಷ್ಮಿ ಮೊಗವೀರಪಟ್ನ, ಕ್ರೀಡಾ ಕಾರ್ಯದರ್ಶಿಯಾಗಿ ರೇಖಾ ಸುರೇಶ್ ಧರ್ಮನಗರ, ಜಯಲಕ್ಷ್ಮೀ ರಾಜೇಶ್ ಕೊಟ್ಟಾರ, ಗೌರವ ಸಲಹೆಗಾರರಾಗಿ ಮಮತ ತಾರನಾಥ ಕೊಟ್ಟಾರ, ನಳಿನಿ ಕಲ್ಲಾಪು, ಸರೋಜಿನಿ ಧರ್ಮನಗರ, ಮಾಲತಿ ತೆಂಗಿನಹಿತ್ಲು, ಇಂದಿರಾ ಮೇಗಿನಮನೆ, ಅಮಿತ ಬಂಡಿಕೊಟ್ಯ ಆಯ್ಕೆಯಾದರು.
Next Story