ಮಟ್ಕಾ ಜುಗಾರಿ: ಇಬ್ಬರ ಬಂಧನ
ಶಿರ್ವ, ಜೂ.30: ಪಾದೂರು ಗ್ರಾಮ ಕೊಲ್ಲಬೆಟ್ಟು ಬಸ್ ನಿಲ್ದಾಣದ ಹಿಂಬದಿಯಲ್ಲಿ ಜೂ.29ರಂದು ಸಂಜೆ ವೇಳೆ ಮಟ್ಕಾ ಜುಗಾರಿ ನಡೆಸುತ್ತಿದ್ದ ಪಾದೂರಿನ ಪ್ರಶಾಂತ್ ಪೂಜಾರಿ(32) ಎಂಬಾತನನ್ನು ಶಿರ್ವ ಪೊಲೀಸರು ಬಂಧಿಸಿದ್ದಾರೆ. ಈ ಬಗ್ಗೆ ಶಿರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪಡುಬಿದ್ರಿ: ಎಲ್ಲೂರು ಗ್ರಾಮದ ಮುದರಂಗಡಿಯ ಬಸ್ ನಿಲ್ದಾಣದ ಬಳಿ ಜೂ.29ರಂದು ಸಂಜೆ ವೇಳೆ ಮಟ್ಕಾ ಜುಗಾರಿ ಆಟ ನಡೆಸುತ್ತಿದ್ದ ಉಚ್ಚಿಲ ಮುಳ್ಳಗುಡ್ಡೆಯ ಸುಭಾಷ್(38) ಎಂಬಾತನನ್ನು ಬಂಧಿಸಿ, 2080ರೂ. ನಗದು ವಶಪಡಿಸಿಕೊಂಡಿದ್ದಾರೆ. ಈ ಬಗ್ಗೆ ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story