ಅಂದರ್ ಬಾಹರ್: 14 ಮಂದಿ ಬಂಧನ
ಉಡುಪಿ, ಜು.4: ಇಂದ್ರಾಳಿ ರೈಲ್ವೆ ಗೋದಾಮು ಬಳಿ ಜು.3ರಂದು ಅಪರಾಹ್ನ ವೇಳೆ ಅಂದರ್-ಬಾಹರ್ ಇಸ್ಪೀಟು ಜುಗಾರಿ ಆಡುತ್ತಿದ್ದ ಶಾಂತೇಶ (40), ಅಕ್ಷಯ್ (22), ನಿತ್ಯಾನಂದ ನಾಯಕ್ (40), ಮಲ್ಲಿಕಾರ್ಜುನ (31), ಪ್ರಕಾಶ ಪಕ್ಕು (24),ಅಮೀನ್ ಸಾಬ್(28), ದೀಪಕ್(30) ಎಂಬವರು 7200 ನಗದು ಸಹಿತ ಉಡುಪಿ ಸೆನ್ ಅಪರಾಧ ಪೊಲೀಸರು ಬಂಧಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಅಂಬಾಗಿಲು ಸಂಜೀವ ಶೆಟ್ಟಿ ಎಂಬವರ ಖಾಲಿ ಜಾಗದಲ್ಲಿ ಜು.3ರಂದು ಸಂಜೆ ವೇಳೆ ಅಂದರ್ ಬಾಹರ್ ಇಸ್ಪೀಟ್ ಜುಗಾರಿ ಆಡುತ್ತಿದ್ದ ಶಿವಕುಮಾರ್ ಉಳ್ಳೂರು(29), ಲಕ್ಷ್ಮಣ್ ಶ್ರೀನಿವಾಸ (22), ಮಾರುತಿ ಅಲ್ಲೂರ್(28), ರಿಯಾಜ್ ಅಹಮ್ಮದ್ ಹುಬ್ಬಳ್ಳಿ(23), ರತನ್ ಕುಮಾರ್(27), ಮಂಜು ನಾಥ ಗಾಣಿಗ (30), ಪ್ರಕಾಶ್ ಪೂಜಾರಿ(55) ಎಂಬವರನ್ನು ಐದು ಮೊಬೈಲ್, 1,640ರೂ. ನಗದು ಸಹಿತ ಉಡುಪಿ ಡಿಸಿಐಬಿ ಪೊಲೀಸರು ಬಂಧಿಸಿದ್ದಾರೆ. ಈ ಬಗ್ಗೆ ಉಡುಪಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story