ಶಾಲೆಯಿಂದ ಹೊರಗುಳಿದ ಬಾಲಕನ ರಕ್ಷಣೆ
ಉಡುಪಿ, ಜು.6:ಕಾರ್ಮಿಕ ಇಲಾಖೆ ಹಾಗೂ ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಜಂಟಿಯಾಗಿ ಸಾಬ್ರಕಟ್ಟೆ ಹೋಟೆಲೊಂದರಲ್ಲಿ ಶಾಲೆ ಬಿಟ್ಟು ಕೆಲಸಕ್ಕೆ ಸೇರಿದ್ದ ಬಾಲಕನನ್ನು ರಕ್ಷಿಸಿ, ಮಕ್ಕಳ ಕಲ್ಯಾಣ ಸಮಿತಿ ಮುಂದೆ ಹಾಜರುಪಡಿಸಿದೆ. ನಂತರ ಆತನನ್ನು ಸಿಎಸ್ಐ ಬಾಯ್ಸಾ ಹೋಮ್ಗೆ ದಾಖಲಿಸಿ, ಆತನನ್ನು ಪುನಃ ಶಾಲೆಗೆ ಸೇರಿಸಲಾಯಿತು.
ಕಾರ್ಯಾಚರಣೆಯಲ್ಲಿ ಉಡುಪಿ ಜಿಲ್ಲಾ ಕಾರ್ಮಿಕ ಅಧಿಕಾರಿ ಬಾಲಕೃಷ್ಣ ಎಂ., ಕಾರ್ಮಿಕ ನಿರೀಕ್ಷಕ ಜೀವನ್ಕುಮಾರ್, ಪ್ರವೀಣ್ಕುಮಾರ್ ಹಾಗೂ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಕಾನೂನು ಪರಿವೀಕ್ಷಣಾಧಿಕಾರಿ ಪ್ರಭಾಕರ್ ಆಚಾರ್ ಭಾಗವಹಿಸಿದ್ದರು.
Next Story