ಪುತ್ತೂರು: ರಿಕ್ಷಾ ಚಾಲಕ ನಾಪತ್ತೆ
ಪುತ್ತೂರು: ರಿಕ್ಷಾ ಚಾಲಕರೊಬ್ಬರು ನಾಪತ್ತೆಯಾಗಿರುವ ಬಗ್ಗೆ ಮನೆಯವರು ಸಂಪ್ಯ ಪೊಲೀಸರಿಗೆ ದೂರು ನೀಡಿದ್ದಾರೆ.
ಪುತ್ತೂರು ತಾಲೂಕಿನ ಸರ್ವೆ ಗ್ರಾದ ಕಲ್ಲಗುಡ್ಡೆ ನಿವಾಸಿ ಐತ್ತಪ್ಪ ಎಂಬವರ ಪುತ್ರ ನಗರದಲ್ಲಿ ಅಟೋ ರಿಕ್ಷಾ ಚಾಲಕರಾಗಿದ್ದ ಹರೀಶ್ ಕೆ(26) ನಾಪತ್ತೆಯಾದವರು.
ಹರೀಶ್ ಅವರು ಜು. 5 ರಂದು ಸಂಜೆ ತನ್ನ ಅಟೋದೊಂದಿಗೆ ಮನಗೆ ಬಂದಿದ್ದು, ಮನೆಯಲ್ಲಿ ಅಟೋ ನಿಲ್ಲಿಸಿ ಹೋಗಿದ್ದು ಹಿಂದಿರುಗಿ ಬಂದಿಲ್ಲ. ಈ ಬಗ್ಗೆ ಸಂಬಂಧಿಕರ ಮನೆಯಲ್ಲಿ ಹುಡುಕಾಡಿದರೂ ಪತ್ತೆಯಾಗಿಲ್ಲ ಎಂದು ಹರೀಶ್ ಅವರ ಸಹೋದರ ದಿನೇಶ್ ಸಂಪ್ಯ ಪೊಲೀಸರಿಗೆ ದೂರು ನೀಡಿದ್ದಾರೆ.
ನಾಪತ್ತೆಯಾದ ಹರೀಶ್ ಸುಮಾರು 5.3 ಅಡಿ ಎತ್ತರವಿದ್ದು, ಎಣ್ಣೆ ಕಪ್ಪು ಮೈಬಣ್ಣ ಹೊಂದಿದ್ದಾರೆ. ಖಾಕಿ ಸಮವಸ್ತ್ರ ಧರಿಸಿದ್ದಾರೆ. ಇವರ ಗುರುತು ಪತ್ತೆಯಾದಲ್ಲಿ ಸಂಪ್ಯ ಪೊಲೀಸ್ ಠಾಣೆಯನ್ನು ಸಂಪರ್ಕಿಸುವಂತೆ ಪೊಲೀಸರು ವಿನಂತಿಸಿದ್ದಾರೆ.
Next Story