ಗುರುಪುರ ಬಂಟರ ಮಾತೃ ಸಂಘದ ಸಭೆ
ಬಜ್ಪೆ, ಜು.8: ಗುರುಪುರ ಬಂಟರ ಮಾತೃ ಸಂಘದ ಮಹಿಳಾ ವಿಭಾಗದ ಸದಸ್ಯೆಯರ ಸಭೆಯು ರವಿವಾರ ಪ್ರಧಾನ ಕಚೇರಿಯಲ್ಲಿ ಜರುಗಿತು.
ಸಂಘದ ಅಭಿವೃದ್ಧಿಯೊಂದಿಗೆ ಮಹಿಳೆಯರಿಗೆ ನೆರವಾಗುವ ನಿಟ್ಟಿನಲ್ಲಿ ‘ಉಳಿತಾಯ ಯೋಜನೆ’ ಆರಂಭಿಸುವ ಕುರಿತು ಚರ್ಚಿಸಲಾಯಿತು. ಬೇರೆಡೆ ಚಾಲ್ತಿಯಲ್ಲಿರುವ ಸ್ತ್ರೀಶಕ್ತಿ ಗುಂಪುಗಳು ನಿರ್ವಹಿಸುವ ಬಡ್ಡಿಯೊಂದಿಗೆ ಸಾಲ ನೀಡುವ ಯೋಜನೆಯಂತೆ ಬಂಟ ಮಹಿಳಾ ಸದಸ್ಯೆಯರ ಉಳಿತಾಯ ಯೋಜನೆ ಕಾರ್ಯರೂಪಕ್ಕೆ ತರಲು ಪ್ರಸ್ತಾವಿಸಿ, ಸದಸ್ಯೆಯರಿಂದ ಒಪ್ಪಿಗೆ ಪಡೆಯಲಾಯಿತು. ಬಳಿಕ ವನಮಹೋತ್ಸವ ಆಚರಿಸಲಾಯಿತು.
ಸಭೆಯಲ್ಲಿ ವಿಭಾಗದ ಅಧ್ಯಕ್ಷೆ ಸುನೀತಾ ಸಿ. ಶೆಟ್ಟಿ ಬೆಳ್ಳೂರುಗುತ್ತು, ಕಾರ್ಯದರ್ಶಿ ರೇವತಿ ಜೆ ಆಳ್ವ ಕಾರಮೊಗರು, ಉಪಾಧ್ಯಕ್ಷೆ ಇಂದ್ರಾಕ್ಷಿ ಪಿ ಶೆಟ್ಟಿ ಗಂಜಿಮಠ, ಜೊತೆ ಕಾರ್ಯದರ್ಶಿ ವೀಣಾ ಆರ್. ಶೆಟ್ಟಿ ಪರಾರಿ, ಸಂಚಾಲಕರಾದ ವಿಜಯಲಕ್ಷ್ಮಿ ಶೆಟ್ಟಿ ಮೊಗರುಗುತ್ತು, ಜಯಲಕ್ಷ್ಮಿ ಎಸ್. ಶೆಟ್ಟಿ ವಾಮಂಜೂರು ಹಾಗೂ ನಳಿನಿ ಶೆಟ್ಟಿ ಗುರುಪುರ ಉಪಸ್ಥಿತರುದ್ದರು.
ಸಂಘದ ಸಾಂಸ್ಕೃತಿಕ ಕಾರ್ಯದರ್ಶಿ ಅಸ್ತಿಕಾ ಶೆಟ್ಟಿ ದೋಣಿಂಜೆಗುತ್ತು ಸ್ವಾಗತಿಸಿದರು.