ಮಂಜನಾಡಿ: ಮೈಸೂರು ಇಬ್ರಾಹಿಂ ಸ್ಮರಣಾರ್ಥ ರಕ್ತದಾನ ಶಿಬಿರ
ಮಂಜನಾಡಿ : ಮೈಸೂರು ಇಬ್ರಾಹಿಂ ಸ್ಮರಣಾರ್ಥ ಬ್ಲಡ್ ಡೋನರ್ಸ್ ಮಂಗಳೂರು ಹಾಗೂ ರೆಡ್ ಕ್ರಾಸ್ ಬ್ಲಡ್ ಬ್ಯಾಂಕ್ ಮಂಗಳೂರು ಸಹಯೋಗದಲ್ಲಿ 190ನೇ ಬೃಹತ್ ರಕ್ತದಾನ ಶಿಬಿರವು ರವಿವಾರ ಮಹದನುಲ್ ಉಲೂಮ್ ಮದ್ರಸ ಮಂಜನಾಡಿ ಇದರ ವಠಾರದಲ್ಲಿ ನಡೆಯಿತು.
ಕಾರ್ಯಕ್ರಮದ ಉದ್ಘಾಟನೆಯನ್ನು ಅಬ್ದುಲ್ ಅಝೀಝ್ (ಮೈಸೂರ್ ಬಾವ ) ಅವರು ನೆರೆವೇರಿಸಿದರು.
ಮುಖ್ಯ ಅತಿಥಿಗಳಾಗಿ ಮಂಜನಾಡಿ ಗ್ರಾಮ ಪಂ. ಸದಸ್ಯ ಇಸ್ಮಾಯಿಲ್ ಬಾವ ಪ್ರಾಸ್ತಾವಿಕ ಮಾತನಾಡಿ ದಿ. ಮೈಸೂರ್ ಇಬ್ರಾಹಿಂರವರ ಸಮಾಜ ಸೇವೆ ಹಾಗೂ ಯುವಕರನ್ನು ಸಾಮಾಜಿಕ ರಂಗದಲ್ಲಿ ಗುರುತಿಸುವ ಗುಣವನ್ನು ನೆನಪಿಸಿದರು ಹಾಗೂ ಬ್ಲಡ್ ಡೊನರ್ಸ್ ಮಂಗಳೂರು ಯಶಸ್ವಿ 5 ವರ್ಷವನ್ನು ಪೂರೈಸಿ 190ಕ್ಕೂ ಹೆಚ್ಚು ರಕ್ತದಾನ ಶಿಬಿರವನ್ನು ಆಯೋಜಿಸಿದ್ದನ್ನು ಶ್ಲಾಘಿಸಿದರು.
ಮಂಜನಾಡಿ ಫ್ರೆಂಡ್ಸ್ ಕ್ಲಬ್ ಅಸೋಸಿಯೇಷನ್ ಅಧ್ಯಕ್ಷ ಕಾಸಿಂ ಮುಂಬೈ, ಉಪಾಧ್ಯಕ್ಷ ಅಶ್ರಫ್ ಮೈಸೂರು, ಅಶ್ರಫ್ ಬಸರ , ನಾಸೀರ್ ಮೈಸೂರು, ನುಸ್ರತುಲ್ ಇಸ್ಲಾಂ ಸಮಿತಿ ಅಧ್ಯಕ್ಷ ಇಬ್ಬ ಮೈಸೂರು, ಹಮೀದ್ ಕೆ ಎಂ, ಮುನೀರ್ ಬಸರ, ಬಶೀರ್ ಪಿ. ಎಂ, ಸಿದ್ದೀಕ್ ಮಂಜೇಶ್ವರ, ಫಾರೂಕ್ ಬಿಗ್ ಗ್ಯಾರೇಜ್ , ಅಬೂಬಕ್ಕರ್ ಕೆ. ಎಂ, ಹನೀಫ್ ಮಂಗಳಾಂತಿ, ಫಯಾಝ್ ಮೊಂಟೆಪದವು, ನವಾಝ್ ಮೈಸೂರ್, ಹಾರಿಸ್ ಮೈಸೂರ್, ಸಿದ್ದಿಕ್ ಮಂಜನಾಡಿ ಮೊದಲಾದವರು ಉಪಸ್ಥಿತರಿದ್ದರು.
ನವಾಝ್ ಕೊಲ್ಲರಕೋಡಿ ಕಾರ್ಯಕ್ರಮ ನಿರೂಪಿಸಿದರು.