ಅಟ್ಲಾಸ್ ಜುವೆಲ್ಲರ್ಸ್ನ 5ನೇ ವಾರ್ಷಿಕೋತ್ಸವ: ಕೂಪನ್ ಡ್ರಾ-ವಿಜೇತರಿಗೆ ಬಹುಮಾನ ವಿತರಣೆ
ಮಂಗಳೂರು, ಜು.15: ಸುರತ್ಕಲ್ನಲ್ಲಿ ಕಾರ್ಯಾಚರಿಸುತ್ತಿರುವ ಅಟ್ಲಾಸ್ ಜುವೆಲ್ಲರ್ಸ್ನ 5ನೇ ವಾರ್ಷಿಕೋತ್ಸವದ ಪ್ರಯುಕ್ತ ಏರ್ಪಡಿಸಲಾಗಿದ್ದ ಅದೃಷ್ಟದ ಕೂಪನ್ಗಳ ಡ್ರಾ ಕಾರ್ಯಕ್ರಮವು ಶುಕ್ರವಾರ ಮಳಿಗೆಯಲ್ಲಿ ನಡೆಯಿತು.
ಪ್ರಥಮ ಬಹುಮಾನ ಡೈಮಂಡ್ರಿಂಗ್ ಸಾಯಿರಾ ಭಾನು, ದ್ವಿತೀಯ ಬಹುಮಾನ ಚಿನ್ನದ ನೆಕ್ಲೆಸ್ ಶ್ರಾವಂತಿ ಸುರತ್ಕಲ್ ಹಾಗೂ ಬಂಪರ್ ಬಹುಮಾನ ಆಕ್ಟಿವಾ ಸ್ಕೂಟಿಯನ್ನು ಜೀವನ್ ಮಧ್ಯ ಪಡೆದರು.
ಬಹುಮಾಗಳನ್ನು ಇಡ್ಯಾ ಮಹಾಲಿಂಗೇಶ್ವರ ದೇವಸ್ಥಾನದ ಪ್ರಧಾನ ಅರ್ಚಕರಾದ ರಮಾನಂದ ಭಟ್, ಸುರತ್ಕಲ್ ಮುಹಿಯುದ್ದೀನ್ ಜುಮಾ ಮಸೀದಿಯ ಖತೀಬ್ ಮುಹಿನುದ್ದೀನ್ ರಝ್ವಿ ವಿಜೇತರಿಗೆ ಹಸ್ತಾಂತರಿಸಿದರು.
ಈ ಸಂದರ್ಭ ಸಂಸ್ಥೆಯ ಪ್ರಬಂಧಕ ರಯೀಸ್, ಉದ್ಯಮಿ ಬಿ. ಕುಶಾಲ್ ಉಪಸ್ಥಿತರಿದ್ದರು.
Next Story