ಜು.20: ಗುರುವಂದನ-ಸನ್ಮಾನ ಕಾರ್ಯಕ್ರಮ
ಮಂಗಳೂರು, ಜು.17: ರೂಪಕ ಕಲಾ ಅಕಾಡಮಿ ಮಂಗಳೂರು ಇದರ ಶಿಷ್ಯ ವೃಂದದ ವತಿಯಿಂದ ಗುರುವಂದನ ಹಾಗೂ ಸನ್ಮಾನ ಕಾರ್ಯಕ್ರಮ ಜು.20ರಂದು ಸಂಜೆ 6 ಗಂಟೆಗೆ ನಗರದ ಟಿ.ವಿ.ರಮಣ ಪೈ ಸಭಾಂಗಣದಲ್ಲಿ ಆಯೋಜಿಸಲಾಗಿದೆ ಎಂದು ಅಕಾಡಮಿಯ ಉಪಾಧ್ಯಕ್ಷ ಎಂ.ದಾಮೋದರ ಭಾಗವತ್ ತಿಳಿಸಿದ್ದಾರೆ.
ನಗರದ ಪ್ರೆಸ್ಕ್ಲಬ್ನಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಕಾರ್ಯಕ್ರಮದಲ್ಲಿ ಪದ್ಮಶ್ರೀ ವೆಂಕಟೇಶ್ ಕುಮಾರ್ ಧಾರವಾಡ ಮತ್ತು ಬಾಲಚಂದ್ರ ಪ್ರಭು ಮುಂಬೈ ಅವರಿಂದ ಸಂಗೀತ ಕಾರ್ಯಕ್ರಮ ನಡೆಯಲಿದೆ. ಸಂಜೆ 5ರಿಂದ 6ರವರೆಗೆ ಪಂಡಿತ್ ಡಾ.ರವೀಂದ್ರ ಗುರುರಾಜ್ ಕಾಟೋಟಿ ಹಾರ್ಮೋನಿಯಂ ಸೋಲೋ ಪ್ರಸ್ತುತಪಡಿಸಲಿದ್ದಾರೆ. ಗುರುಗಳಾದ ಪಂಡಿತ್ ಒಂಕಾರನಾಥ್ ಗುಲ್ವಾಡಿಗೆ ಸನ್ಮಾನ ನಡೆಯಲಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಅಕಾಡಮಿಯ ಕಾರ್ಯದರ್ಶಿ ದೀಪಕ್ ನಾಯಕ್, ಖಜಾಂಚಿ ರಾಜೇಶ್ ಭಾಗವತ್ ಉಪಸ್ಥಿತರಿದ್ದರು.
Next Story