ಪುತ್ತೂರಿನಲ್ಲಿ ಶ್ರೀಲಂಕಾದ ಮಾಜಿ ಕ್ರಿಕೆಟರ್ ಮುತ್ತಯ್ಯ ಮುರಳೀಧರನ್
ಪುತ್ತೂರು: ಮಾಜಿ ಕ್ರಿಕೆಟಿಗ, ಶ್ರೀಲಂಕಾದ ಮುತ್ತಯ್ಯ ಮುರಳೀಧರ್ ಬುಧವಾರ ಪುತ್ತೂರಿಗೆ ಆಗಮಿಸಿ ಇಲ್ಲಿನ `ಬಿಂದು' ಮಿನರಲ್ ಕುಡಿಯುವ ನೀರು ಕಚೇರಿಗೆ ಭೇಟಿ ನೀಡಿದರು.
ಪುತ್ತೂರು ತಾಲೂಕಿನ ನರಿಮೊಗರು ಎಂಬಲ್ಲಿರುವ ಸಂಸ್ಥೆಯ ಕಚೇರಿಗೆ ಭೇಟಿ ನೀಡಿದ ಮುತ್ತಯ್ಯ ಮುರಳೀಧರನ್ ಅವರು ಸಂಸ್ಥೆಯ ಮುಖ್ಯಸ್ಥ ಸತ್ಯಶಂಕರ್ ಭಟ್ ಅವರೊಂದಿಗೆ ಮಾತುಕತೆ ನಡೆಸಿರುವುದಾಗಿ ತಿಳಿದು ಬಂದಿದೆ.
ಈಗಾಗಲೇ ಪಾನೀಯ ಉತ್ಪನ್ನಗಳ ಬಗ್ಗೆ ಆಸಕ್ತಿ ಹೊಂದಿರುವ ಮುತ್ತಯ್ಯ ಮುರಳೀಧರನ್ ಅವರು ಈ ಬಗ್ಗೆ ವ್ಯವಹಾರಕ್ಕಾಗಿ 'ಬಿಂದು-ಶಂಕರ್ ಗ್ರೂಪ್ ಆಫ್ ಕಂಪೆನಿಯ ಪ್ರಧಾನ ಕಚೇರಿ ಹೊಂದಿರುವ ಇಲ್ಲಿಗೆ ಭೇಟಿ ನೀಡಿರುವುದಾಗಿ ತಿಳಿದು ಬಂದಿದೆ.
Next Story