ಕಾರ್ಕಳ, ಜು.17: ಕಾರ್ಕಳ ತಾಲೂಕು ಕಚೇರಿಯ ದ್ವಿತೀಯ ದರ್ಜೆ ಸಹಾಯಕ ಬಜಗೋಳಿ ನಿವಾಸಿ ಶ್ರೀನಾಥ್ ಎಂಬವರು ಜು.15ರಂದು ಬೆಳಗ್ಗೆ ಕಚೇರಿಯ ಆವರಣದಲ್ಲಿ ನಿಲ್ಲಿಸಿದ್ದ 30ಸಾವಿರ ರೂ. ಮೌಲ್ಯದ ಕೆಎ20 ಇಎಲ್4456 ನಂಬರಿನ ಜ್ಯುಪಿಟರ್ ದ್ವಿಚಕ್ರ ವಾಹನ ಕಳವಾಗಿರುವ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.