ಗದ್ದೆಯಲ್ಲಿ ಬಿದ್ದು ಮೃತ್ಯು
ಕುಂದಾಪುರ, ಜು.17: ಗದ್ದೆಯಲ್ಲಿ ಬೇಲಿ ಕಟ್ಟುತ್ತಿದ್ದ ವ್ಯಕ್ತಿಯೊಬ್ಬರು ಕವುಚಿ ಬಿದ್ದು ಮೃತಪಟ್ಟ ಘಟನೆ ಜು.16ರಂದು ಸಂಜೆ ವೇಳೆ ವಕ್ವಾಡಿ ಗ್ರಾಮದ ಹೂವಿನಕೆರೆ ಮಠದ ರಸ್ತೆ ಎಂಬಲ್ಲಿ ನಡೆದಿದೆ.
ಮೃತರನ್ನು ಹೂವಿನಕೆರೆ ಮಠದ ರಸ್ತೆ ನಿವಾಸಿ ಗುಂಡು ಶೆಟ್ಟಿಗಾರ(76) ಎಂದು ಗುರುತಿಸಲಾಗಿದೆ. ಮನೆಯ ಗದ್ದೆಯ ಬೇಲಿ ಕಟ್ಟಲು ಹೋಗಿದ್ದ ಇವರು ಆಕಸ್ಮಿಕವಾಗಿ ಬಿದ್ದು ಮೃತಪಟ್ಟಿದ್ದಾರೆ. ಈ ಬಗ್ಗೆ ಕುಂದಾಪುರ ಪೊಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ.
Next Story