ಯುವತಿ ನಾಪತ್ತೆ: ದೂರು
ಪುತ್ತೂರು: ಯುವತಿಯೋರ್ವರು ಕಳೆದ 18 ದಿನಗಳ ಹಿಂದೆ ನಾಪತ್ತೆಯಾದ ಘಟನೆ ಪುತ್ತೂರು ಮಹಿಳಾ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದು ತಡವಾಗಿ ಪೊಲೀಸರಿಗೆ ದೂರು ನೀಡಲಾಗಿದೆ.
ಪುತ್ತೂರು ಕಸ್ಬಾದ ಪರ್ಲಡ್ಕ ಕಲ್ಲಿಮಾರ್ ನಿವಾಸಿ ಪಿ.ಉಮೇಶ್ ಆಚಾರ್ಯ ಎಂಬವರ ಪುತ್ರಿ ಕುಮಾರಿ ಚೈತ್ರಾ. ಪಿ (25) ನಾಪತ್ತೆಯಾದ ಯುವತಿ.
ತಮ್ಮ ಪುತ್ರಿ ಚೈತ್ರಾ ಕಳೆದ ಜೂ. 29ರಂದು ಮನೆಯಿಂದ ಮುಂಜಾನೆ ಕಾಣೆಯಾಗಿದ್ದು, ನಂತರ ಫೋನ್ ಮಾಡಿ ತನ್ನನ್ನು ಹುಡುಕಬೇಡಿ. ನಾನು ಬೇರೆ ಕಡೆ ಇದ್ದೇನೆ ಎಂದು ತಿಳಿಸಿದ್ದಳು. ಜುಲೈ 16ರಂದು ಮತ್ತೆ ಫೋನ್ ಮಾಡಿ ತಾನು ಪ್ರೀತಿಸಿದ ಹುಡುಗನೊಂದಿಗೆ ಇದ್ದೇನೆ. ನನ್ನನ್ನು ದಯಮಾಡಿ ಹುಡುಕಬೇಡಿ ಎಂದಿದ್ದಳು. ಈ ಕಾರಣದಿಂದ ಆಕೆ ಮನೆಗೆ ಬರಬಹುದು ಎಂಬ ಆಶಾವಾದದಿಂದ ಪೊಲೀಸ್ ಠಾಣೆಗೆ ದೂರು ನೀಡಿರಲಿಲ್ಲ. ಆದರೆ ಆಕೆ ಮನೆಯಿಂದ ಹೋಗಿ 18 ದಿನಗಳಾದರೂ ಬಂದಿಲ್ಲ. ತನ್ನ ಮಗಳನ್ನು ಹುಡುಕಿಕೊಡುವಂತೆ ಚೈತ್ರಾ ಅವರ ತಂದೆ ಉಮೇಶ್ ಆಚಾರ್ಯ ಬುಧವಾರ ಪುತ್ತೂರು ನಗರ ಪೊಲೀಸರಿಗೆ ದೂರು ನೀಡಿದ್ದಾರೆ.
25 ವರ್ಷದ ಚೈತ್ರಾ ಕನ್ನಡ ತುಳು ಮಾತನಾಡುತ್ತಿದ್ದು, ಬಿಳಿ ಮೈ ಬಣ್ಣ ಹೊಂದಿದ್ದಾರೆ. ಮನೆಯಿಂದ ಹೋಗುವಾಗ ಬಿಳಿ ಬಣ್ಣದ ಚೂಡಿದಾರ್ ಧರಿಸಿದ್ದರು. 164 ಸೆ.ಮೀ ಎತ್ತರವಿದ್ದು, ಈಕೆಯ ಗುರುತು ಪತ್ತೆಯಾದವರು ಪೊಲೀಸ್ ಕಂಟ್ರೋಲ್ ರೂಂ.ನಂ. 0824-2220508 ಮತ್ತು ಪುತ್ತೂರು ಮಹಿಳಾ ಠಾಣೆ ದೂರವಾಣಿ ನಂ.08251-7233500 ಈ ಸಂಖ್ಯೆಗೆ ತಿಳಿಸುವಂತೆ ಪೊಲೀಸರು ಮನವಿ ಮಾಡಿದ್ದಾರೆ.