ಉಡುಪಿ: ಬಳಕೆದಾರರ ವೇದಿಕೆಯಲ್ಲಿ ಬಜೆಟ್ ಚರ್ಚೆ
ಉಡುಪಿ, ಜು.18: 2019-20ನೇ ಸಾಲಿನ ಕೇಂದ್ರ ವಾರ್ಷಿಕ ಆಯವ್ಯಯ ಪಟ್ಟಿ (ಬಜೆಟ್) ಕುರಿತು ಮಾಹಿತಿ ನೀಡುವ ಹಾಗೂ ಗ್ರಾಹಕರ ಜತೆ ಮುಖಾಮುಖಿ/ಸಂವಾದ ನಡೆಸುವ ಕಾರ್ಯಕ್ರಮವೊಂದನ್ನು ಜು.22ರ ಸಂಜೆ 4 ಗಂಟೆಗೆ ಉಡುಪಿ ಬಳಕೆದಾರರ ವೇದಿಕೆಯ ವತಿಯಿಂದ ಹಮ್ಮಿಕೊಳ್ಳಲಾಗಿದೆ.
ಉಡುಪಿಯ ನಾರ್ತ್ ಶಾಲಾ ಆವರಣದಲ್ಲಿರುವ ಉಡುಪಿ ಬಳಕೆದಾರರ ವೇದಿಕೆಯ ಸಭಾಂಗಣದಲ್ಲಿ ಉಡುಪಿಯ ಖ್ಯಾತ ಲೆಕ್ಕಪರಿಶೋಧಕರಾದ ವೈ.ಗಣೇಶ ರಾವ್ ಕಾರ್ಯಕ್ರಮವನ್ನು ನಡೆಸಿಕೊಡಲಿದ್ದು, ಆಸಕ್ತರೆಲ್ಲರು ಇದರಲ್ಲಿ ಭಾಗವಹಿಸುವಂತೆ ಉಡುಪಿ ಬಳಕೆದಾರರ ವೇದಿಕೆಯ ಸಂಚಾಲಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Next Story