ಬಿಕರ್ನಕಟ್ಟೆ: ಯುವಕ ನಾಪತ್ತೆ
ಮಂಗಳೂರು, ಜು.19: ಬಿಕರ್ನಕಟ್ಟೆ ನಿವಾಸಿ ಶ್ರೀಧರ್ (31) ಎಂಬವರು ಜು.18ರಂದು ಸ್ಕೂಟರ್ ಜತೆ ಹೊರಗೆ ಹೋದವರು ಮರಳಿ ಬಾರದೆ ನಾಪತ್ತೆಯಾಗಿದ್ದಾರೆ.
ಶ್ರೀಧರ್ ಅವರು ಮದ್ಯ ಸೇವಿಸುವ ಅಭ್ಯಾಸದವರಾಗಿದ್ದು, ಜು.18ರಂದು ಪತ್ನಿ ಜತೆ ವಿನಾಕಾರಣ ಗಲಾಟೆ ಮಾಡಿದ್ದಾರೆ. ಆ ಬಳಿಕ ಕುಡಿಯಲು ಹಣ ಕೇಳಿ ತಗಾದೆ ತೆಗೆದಿದ್ದು, ಕೊಡದಿದ್ದಾಗ ಮಧ್ಯಾಹ್ನ 3:30ಕ್ಕೆ ಸ್ಕೂಟರ್ ಸಹಿತ ಹೋದವರು ಮರಳಿ ಬಾರದೆ ನಾಪತ್ತೆಯಾಗಿದ್ದಾರೆ.
ಈ ಬಗ್ಗೆ ಕದ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story